ವಿಟ್ಲ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ರಸ್ತೆಯಲ್ಲಿ ತ್ಯಾಜ್ಯ ಎಸೆಯುತ್ತಿದ್ದವರನ್ನು ಸಾರ್ವಜನಿಕರು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ್ದಾರೆ.
ಮಾಣಿ ಮೈಸೂರು ಹೆದ್ದಾರಿಯ ಕೊಡಾಜೆಯ ಕೆ.ಎಸ್.ಹೋಟೆಲ್ ಸಿಬ್ಬಂದಿ ಬಿಹಾರ ಮೂಲದ ಇರ್ತಿಜಾ ಯಾನೆ ಚೋಟು, ಮಹಮ್ಮದ್ ಜಿಯಾವುಳ್ ತ್ಯಾಜ್ಯ ಎಸೆಯುತ್ತಿದ್ದ ಸಂದರ್ಭ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ವಿಟ್ಲ ಠಾಣೆಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ನಿರಂತರವಾಗಿ ಬೀಳುತ್ತಿರುವ ತ್ಯಾಜ್ಯಗಳ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಎಸೆಯುವವರು ಮಾತ್ರ ಎಸೆಯುತ್ತಲೇ ಇದ್ದಾರೆ. ತ್ಯಾಜ್ಯ ಎಸೆಯುವವರಿಗೆ ಕಾನೂನಿನ ಭಯವಿಲ್ಲದ ಕಾರಣ ಇಂತಹ ಕೃತ್ಯ ನಡೆಯುತ್ತಿದೆ. ಸ್ಥಳದಲ್ಲಿ ಬಿದ್ದ ಸಂಪೂರ್ಣ ಕಸವನ್ನು ಹೊಟೇಲ್ ಮಾಲೀಕರಾದ ಮಹಮ್ಮದ್ ಆಸಿಫ್ ಅವರಿಂದ ಸ್ವಚ್ಚಗೊಳಿಸಲಾಯಿತು.