ಮುಂಬೈ: ಬಾಲಿವುಡ್ನಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್ಗಳು ತೆರೆಗೆಬಂದಿವೆ. ತೆರೆಮರೆಯ ಹೀರೋನನ್ನು ಇಡೀ ದೇಶಕ್ಕೆ ಬಯೋಪಿಕ್ ಮೂಲಕ ಪರಿಚಯಿಸಲಾಗಿದೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರ ಬಯೋಪಿಕ್ ಸಹ ಬಾಲಿವುಡ್ನಲ್ಲಿ ನಿರ್ಮಾಣ ಮಾಡುವ ಕೆಲಸ ಶುರುವಾಗಿದ್ದು, ಇದೀಗ ಈ ಚಿತ್ರಕ್ಕೆ ದಕ್ಷಿಣದ ನಂಟು ಅಂಟಿಕೊಂಡಿದೆ.
ಇದನ್ನೂ ಓದಿ: ನೋಡಲು ಥೇಟ್ ಶಾರುಖ್ರಂತೆ ಕಾಣುವ ಕಾಶ್ಮೀರಿ ಹುಡುಗನ ಫೋಟೋ ಹಿಂದಿನ ಅಸಲಿಯತ್ತೇ ಬೇರೆ!
ಹೌದು, ವಿಶ್ವನಾಥನ್ ಆನಂದ್ ಮೂಲತಃ ತಮಿಳುನಾಡಿನವರು. ಇದೀಗ ಕಾಲಿವುಡ್ನ ನಟನನ್ನೇ ಸಿನಿಮಾದಲ್ಲಿ ಆಯ್ದುಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಅದರಂತೆ ತಮಿಳು ನಟ ಧನುಷ್ ಚೆಸ್ ಮಾಂತ್ರಿಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಸುದ್ದಿ ಹರಿದಾಡುವುದಕ್ಕೂ ಒಂದು ಕಾರಣವಿದೆ. ಹಿಂದಿಯಲ್ಲಿ ತೆರೆಕಂಡ ರಾಂಜನ ಸಿನಿಮಾ ಮೂಲಕ ಧನುಷ್ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದರು. ಆ ಚಿತ್ರವನ್ನು ಆನಂದ್ ಎಲ್ ರಾಯ್ ನಿರ್ದೇಶನ ಮಾಡಿದ್ದರು. ಇದೀಗ ಸೌತ್ ಕಥೆಗೆ ಅಲ್ಲಿನ ವ್ಯಕ್ತಿಯನ್ನೇ ಆಯ್ದುಕೊಳ್ಳುವ ಸಾಧ್ಯತೆ ಇದೆ. ಅದರಂತೆ ಧನುಷ್ ಹೆಸರು ಕೇಳಿಬಂದಿದೆ.
ಇದನ್ನೂ ಓದಿ: ಕನ್ನಡದಲ್ಲೂ ಬಿಡುಗಡೆಯಾಗಲಿದೆ ರಾಮ್ಗೋಪಾಲ್ ವರ್ಮಾ ನಿರ್ಮಾಣದ ‘ಮರ್ಡರ್’
ಈ ಮೊದಲು ಅಭಿಷೇಕ್ ಬಚ್ಚನ್ ಗ್ರ್ಯಾಂಡ್ಮಾಸ್ಟರ್ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಸದ್ಯಕ್ಕೆ ನಿರ್ದೇಶಕರಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಕಲಾವಿದರ ಆಯ್ಕೆ ಸೇರಿ ಶೀರ್ಷಿಕೆ ವಿಚಾರವನ್ನು ಮುಂದಿನ ವರ್ಷವೇ ಘೋಷಣೆ ಆಗಲಿದೆ. ವಿಶ್ವನಾಥನ್ ಚೆಸ್ನಲ್ಲಿ ಒಟ್ಟು 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಅದರ ಹಿನ್ನೆಲೆಯಲ್ಲಿಯೇ ಸಿನಿಮಾ ಮೂಡಿಬರಲಿದ್ದು, ಸದ್ಯ ಸ್ಕ್ರಿಪ್ಟಿಂಗ್ ಹಂತದಲ್ಲಿದೆ. 2021 ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಸೆಟ್ಟೇರಲಿರುವ ಈ ಚಿತ್ರಕ್ಕೆ ಮಹಾವೀರ್ ಜೈನ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.(ಏಜೆನ್ಸೀಸ್)