ಈಗಾಗಲೇ ಲಾಕ್ಡೌನ್ ಹಿನ್ನೆಲೆಯಲ್ಲಿ ದಶಕಗಳ ಹಿಂದೆ ಇತಿಹಾಸ ಸೃಷ್ಟಿಸಿದ ಸಾಕಷ್ಟು ಧಾರಾವಾಹಿಗಳು ಮರುಪ್ರಸಾರ ಕಾಣುತ್ತಿವೆ. ಅದರಲ್ಲೂ ರಾಮಾಯಣ ವಿಶ್ವದ ನಂ 1 ಟಿವಿ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಹೀಗಿರುವಾಗಲೇ ಇದೇ ಧಾರಾವಾಹಿ ಸಿನಿಮಾ ರೂಪದಲ್ಲಿ ನೋಡುಗರ ಎದುರಿಗೆ ಬಂದರೆ? ಹೌದು, ರಾಮಾಯಣ ಕಥಾನಕವನ್ನು ಸಿನಿಮಾ ರೂಪದಲ್ಲಿ ನೀಡುವಂತೆ ಸಾಕಷ್ಟು ಜನ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಬೇಡಿಕೆಯನ್ನೇ ಇಟ್ಟಿದ್ದಾರೆ.
ಹಾಗಾದರೆ, ಆ ಚಿತ್ರವನ್ನು ನಿರ್ದೇಶಿಸುವವರಾದರೂ ಯಾರು? ಅದಕ್ಕೂ ಇಲ್ಲಿ ಉತ್ತರ ಇದೆ. ಇಡೀ ದೇಶವೇ ಮೆಚ್ಚುವಂಥ ‘ಬಾಹುಬಲಿ’ ಸಿನಿಮಾ ನೀಡಿದ ಎಸ್.ಎಸ್. ರಾಜಮೌಳಿ ರಾಮಾಯಣ ಸಿನಿಮಾ ನಿರ್ದೇಶಿಸಬೇಕು. ಇದು ಅವರಿಂದ ಮಾತ್ರ ಸಾಧ್ಯ ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಟ್ವಿಟರ್ನಲ್ಲಿ ರಾಜಮೌಳಿ ಮೇಕ್ ರಾಮಾಯಣ ಎಂಬ ಬರಹಕ್ಕೆ ಹ್ಯಾಷ್ಟ್ಯಾಗ್ ಹಾಕಿ ಸಿನಿಮಾ ಮಾಡುವಂತೆ ಕೋರುತ್ತಿದ್ದಾರೆ.
ಇದನ್ನೂ ಓದಿ: ತೆಲುಗಿನ ದೊಡ್ಡ ಸ್ಟಾರ್ಗೆ ನಾಯಕಿಯಾದರಾ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್?
‘ರಾಮ ಎಂಬುದು ಕೇವಲ ಒಂದು ಹೆಸರಲ್ಲ. ಈ ಜಗತ್ತಿನಲ್ಲಿರುವ ಪ್ರತಿ ಜೀವಿಗೂ ರಾಮನ ಜೀವನ ಒಂದು ಸಂದೇಶದಂತೆ. ಹಾಗಾಗಿ ಹಿರಿತೆರೆಯ ಮೇಲೆ ರಾಮಾಯಣ ಸಿನಿಮಾ ರೂಪದಲ್ಲಿ ಸೃಷ್ಟಿಯಾಗಲಿ. ಅದರ ನಿರ್ದೇಶನದ ಉಸ್ತುವಾರಿಯನ್ನು ರಾಜಮೌಳಿ ವಹಿಸಿಕೊಳ್ಳಲಿ’ ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಜೂ ಎನ್ಟಿಆರ್ ರಾಮನಾಗಿ ಕಾಣಿಸಿಕೊಳ್ಳಲಿ ಎಂದಿದ್ದಾರೆ.
ಸದ್ಯ ಇದ್ಯಾವುದಕ್ಕೂ ರಾಜಮೌಳಿ ಕಡೆಯಿಂದ ಉತ್ತರ ಬಂದಿಲ್ಲ. ಆರ್ಆರ್ಆರ್ ಸಿನಿಮಾದಲ್ಲಿಯೇ ಹೆಚ್ಚು ಬಿಜಿಯಾಗಿದ್ದು, ಲಾಕ್ಡೌನ್ ಹೊತ್ತಲ್ಲೂ ಸಿನಿಮಾ ಕಡೆಗೆ ಗಮನ ಹರಿಸಿದ್ದಾರೆ. (ಏಜೆನ್ಸೀಸ್)
ಮತ್ತೆ ಬಾಲ್ಯಕ್ಕೆ ಕರೆದೊಯ್ಯಲಿದೆ ಶಂಕರ್ನಾಗ್ ನಿರ್ದೇಶನದ ಆ ಧಾರಾವಾಹಿ; ಮರುಪ್ರಸಾರ ಯಾವಾಗ?