ಬಾಹುಬಲಿ ಚಿತ್ರದ ಮೊದಲ ಅವತರಣಿಕೆ ಬಿಡುಗಡೆಯಾಗಿ 5 ವರ್ಷವಾದ ಬೆನ್ನಲ್ಲೇ, ಆ ಮಾಸ್ಟರ್ಪೀಸ್ ಚಿತ್ರದ ಭಾಗವಾಗಿದ್ದ ಎಷ್ಟೋ ಕಲಾವಿದರು, ಮತ್ತೆ ಆ ಚಿತ್ರದ ಬಗ್ಗೆ ಮಾತನಾಡಿದ್ದರು. ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಾಜಮೌಳಿ ಹೀಗೆ ಅವರವರ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದರು. ಇದೀಗ ಸಿನಿಮಾ ಮುಗಿದು, ಹಲವು ದಾಖಲೆ ಸೃಷ್ಟಿಸಿದ ಬಳಿಕ ಈ ಚಿತ್ರದ ಮುಖ್ಯವಾದ ವಿಚಾರವೊಂದು ಹೊರಬಿದ್ದಿದೆ.
ಇದನ್ನೂ ಓದಿ: ವಿದೇಶಿ ಚಿತ್ರೀಕರಣಕ್ಕೆ ಸಲ್ಮಾನ್ ಗುಡ್ ಬೈ; ಮುಂಬೈ ಸ್ಟುಡಿಯೋದಲ್ಲಿಯೇ ಎಲ್ಲವೂ ಸೃಷ್ಟಿ..
ಬಾಹುಬಲಿಯಾಗಿ ಪ್ರಭಾಸ್, ಬಲ್ಲಾಳದೇವನಾಗಿ ರಾಣಾ ಆಯ್ಕೆ ಆದಂತೆ, ಕಟ್ಟಪ್ಪ ಪಾತ್ರಕ್ಕೆ ಬಾಲಿವುಡ್ನ ಖ್ಯಾತ ನಟರೊಬ್ಬರನ್ನು ಗಮನದಲ್ಲಿಟ್ಟುಕೊಂಡು ಪಾತ್ರವನ್ನು ಹೆಣೆದಿದ್ದರಂತೆ ಕಥೆಗಾರ ವಿಜಯೇಂದ್ರ ಪ್ರಸಾದ್. ಆದರೆ, ಕೊನೆಗೆ ಅದು ಸತ್ಯರಾಜ್ ಅವರು ನಿಭಾಯಿಸಬೇಕಾಯಿತು. ಅಂದುಕೊಂಡಂತೆ ನಡೆದಿದ್ದರೆ, ಬಾಲಿವುಡ್ನ ಸಂಜಯ್ ದತ್ ಕಟ್ಟಪ್ಪನಾಗಿ ಬಣ್ಣಹಚ್ಚಬೇಕಿತ್ತು.
ಇದನ್ನೂ ಓದಿ: ಗಂಗೂಬಾಯಿ ಜತೆಯಾದ ರಣವೀರ್
ಹೌದು, ಈ ವಿಚಾರ ಅಷ್ಟಾಗಿ ಎಲ್ಲಿಯೂ ಬಹಿರಂಗ ಆಗಿರಲಿಲ್ಲ. ಇದೀಗ ಮತ್ತೆ ಸದ್ದು ಮಾಡುತ್ತಿದ್ದು, ಈ ಪಾತ್ರ ದತ್ ಕೈ ತಪ್ಪಿದ್ದು ಹೇಗೆ ಎಂಬುದಕ್ಕೂ ಉತ್ತರ ಸಿಕ್ಕಿದೆ. ಬಾಹುಬಲಿ ಸಿನಿಮಾ ಚಿತ್ರೀರರಣ ಆರಂಭಿಸಿದ್ದು 2013ರಲ್ಲಿ. ಆ ಹೊತ್ತಿನಲ್ಲಿ ಸಂಜಯ್ ದತ್ ಜೈಲಿನಲ್ಲಿದ್ದ ಕಾರಣ, ಅನಿವಾರ್ಯವಾಗಿ ಸತ್ಯರಾಜ್ಗೆ ಈ ಪಾತ್ರವನ್ನು ನೀಡಲಾಯಿತು.
ಈ ವಿಚಾರವನ್ನು ಬಾಹುಬಲಿ ಕಥೆಗಾರ ಮತ್ತು ರಾಜಮೌಳಿ ತಂದೆ ವಿ ವಿಜಯೇಂದ್ರ ಪ್ರಸಾದ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. (ಏಜೆನ್ಸೀಸ್)