More

    ರಾತ್ರೋರಾತ್ರಿ ದೇವರನ್ನೇ ಕದ್ದ ಖದೀಮರು..!

    ಮೈಸೂರು: ದೇವರು ಎಂದಾಕ್ಷಣ ಮನದಲ್ಲಿ ಭಕ್ತಿ ಮೂಡಲಿದೆ. ದುಷ್ಟರಿಂದ ನಮ್ಮನ್ನು ರಕ್ಷಿಸು ದೇವರೆ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ. ಅಂತಹ ಶಿಷ್ಟ ಶಕ್ತಿಯ ಮೇಲೆಯೇ ದುಷ್ಟರು ತಮ್ಮ ಕೈಚಳಕ ತೋರಿದ್ದಾರೆ.

    ಹೌದು, ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ ಶಕ್ತಿದೇವತೆಗಳಾದ ದೊಡ್ಡಮ್ಮ ಮತ್ತು ಕರಿಯಮ್ಮ ದೇವಿಯ ಬೆಳ್ಳಿ ವಿಗ್ರಹಗಳನ್ನೇ ಕಳ್ಳರು ದೋಚಿದ್ದಾರೆ.

    ಇದನ್ನೂ ಓದಿರಿ ‘ನಾ ಖಾವೂಂಗಾ, ನಾ ಖಾನೆ ದೂಂಗಾ’ ಹೇಳಿಕೆ ಪ್ರಶ್ನಿಸಿ ಪ್ರಧಾನಿ ಮೋದಿಗೆ ಬಹಿರಂಗ ಪತ್ರ!

    ಭೇರ್ಯ ಗ್ರಾಮದ ದೇಗುಲಕ್ಕೆ ಐದು ತಿಂಗಳ ಹಿಂದಷ್ಟೇ ದೊಡ್ಡಮ್ಮ ಮತ್ತು ಕರಿಯಮ್ಮ ದೇವರ ತಲಾ ಅರ್ಧ ಕೆ.ಜಿ. ತೂಕದ ಎರಡು ಬೆಳ್ಳಿ ಮುಖವಾಡಗಳನ್ನು ಭಕ್ತರು ಮಾಡಿಸಿಕೊಟ್ಟಿದ್ದರು. ನಿನ್ನೆ(ಗುರವಾರ)ರಾತ್ರಿ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ದೊಡ್ಡಮ್ಮ ದೇವಿ, ಕರಿಯಮ್ಮ ದೇವಿಯ ಬೆಳ್ಳಿ ಮುಖವಾಡದ ಎರಡೂ ವಿಗ್ರಹಗಳನ್ನು ಕದ್ದು ಪರಾರಿಯಾಗಿದ್ದಾರೆ.

    ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ನಾಡಗೌಡ ಕುಮಾರಸ್ವಾಮಿ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ನಿಖಿಲ್​ ಕುಮಾರಸ್ವಾಮಿಗೆ ಜೆಡಿಎಸ್​ ಕಾರ್ಯಕರ್ತರಿಂದಲೇ ಹಿಗ್ಗಾಮುಗ್ಗಾ ತರಾಟೆ.. ರಾಜೀನಾಮೆ ಕೊಡುವಂತೆ ಖಡಕ್ ವಾರ್ನಿಂಗ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts