More

    ವಂಚಿಸಿದವನ ವಿರುದ್ಧ ದೂರು ಕೊಡಲು ಠಾಣೆಗೆ ಬಂದವಳು ಅಸ್ವಸ್ಥಳಾಗಿ ಬಿದ್ದು ಹೋದಳು…

    ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ವ್ಯಕ್ತಿ ವಂಚಿಸಿದ ಎಂಬ ಕಾರಣಕ್ಕೆ ನೊಂದ ಮಹಿಳೆ, ಶೌಚಗೃಹ ಸ್ವಚ್ಛತೆಗೆ ಬಳಸುವ ದ್ರಾವಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಂಚಕನ ವಿರುದ್ಧ ದೂರು ಕೊಡಲು ಠಾಣೆಗೆ ತೆರಳಿದ್ದಾಗ ಅಸ್ವಸ್ಥಗೊಂಡು ಬಿದ್ದಿದ್ದಾಳೆ. ಪೊಲೀಸರು, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದ, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

    ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಲೋಕೇಶ್ ಎಂಬಾತನ ವಿರುದ್ಧ ಅತ್ಯಾಚಾರ ಆರೋಪ ಹಾಗೂ ಸಂತ್ರಸ್ತೆ ವಿರುದ್ಧ ಆತ್ಮಹತ್ಯೆಗೆ ಯತ್ನ ಆರೋಪದಡಿ ಜ್ಞಾನಭಾರತಿ ಠಾಣೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

    ಇದನ್ನೂ ಓದಿ: VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾಕ್​ ವಿಮಾನ ಪತನದ ಭೀಕರ ದೃಶ್ಯ…!

    ವಿಚ್ಛೇದನ ಪಡೆದಿದ್ದಳು: ಭುವನೇಶ್ವರಿನಗರ ನಿವಾಸಿ 35 ವರ್ಷದ ಸಂತ್ರಸ್ತ ಮಹಿಳೆ, ಚಂದ್ರಶೇಖರ್ ಎಂಬಾತನ ಜತೆ ವಿವಾಹವಾಗಿದ್ದಳು. ಈತ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ 2017ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಳು. ಇದೇ ವೇಳೆ ಸಂತ್ರಸ್ತೆಗೆ ಪರಿಚಯವಾಗಿದ್ದ ಲೋಕೇಶ್ ಮದುವೆಯಾಗುವುದಾಗಿ ನಂಬಿಸಿದ್ದ.

    ಇದನ್ನೂ ಓದಿ: ಸಿಕ್ಕ ಚಿನ್ನವನ್ನು 20 ವರ್ಷದ ಬಳಿಕ ಮರಳಿಸಿ ಕ್ಷಮೆ ಕೇಳ್ದ

    ಐಐಎಸ್​ಸಿ ಹಾಸ್ಟೆಲ್​ಗೆ ಕರೆಸಿಕೊಂಡು ಹಾಗೂ ಪ್ರವಾಸಕ್ಕೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಮದುವೆಯಾಗುವಂತೆ ಮಹಿಳೆ ಕೇಳಿದಾಗ ನೆಪ ಹೇಳಿ ಮುಂದೂಡಿದ್ದ. ಲಾಕ್​ಡೌನ್ ಹಿನ್ನೆಲೆಯಲ್ಲಿ ಆತನ ಭೇಟಿ ಸಾಧ್ಯವಾಗಿಲ್ಲ. ‘ನಾವಿಬ್ಬರೂ ಯಾವಾಗಲೂ ಜಗಳ ಮಾಡಿಕೊಳ್ಳುತ್ತಿರುತ್ತೇವೆ. ನಮಗೆ ಸಂಬಂಧ ಸರಿ ಹೋಗುವುದಿಲ್ಲ’ ಎಂದು ಇತ್ತೀಚೆಗೆ ಇಮೇಲ್ ಕಳುಹಿಸಿದ್ದ. ಮೇ 20ರಂದು ವಾಟ್ಸ್​ಆಪ್ ಪರಿಶೀಲಿಸುತ್ತಿದ್ದಾಗ ಬೇರೆ ಯುವತಿ ಜತೆ ಮದುವೆಯಾಗಿರುವುದು ಗೊತ್ತಾಯಿತು.ಇದರಿಂದ ಮನನೊಂದು ಶೌಚಗೃಹ ಸ್ವಚ್ಛತೆಗೆ ಬಳಸುವ ದ್ರಾವಣ ಸೇವಿಸಿರುವುದಾಗಿ ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾಳೆ.

    VIDEO: ಸಚಿನ್​ ತೆಂಡೂಲ್ಕರ್​ ನೀಡಿದ್ದ ಚಾಲೆಂಜ್ ಸ್ವೀಕರಿಸಿದ ವಿಜಯಪುರ ಬಾಲಕ; ಕ್ರಿಕೆಟ್​ ಪ್ರಿಯರು ಫುಲ್​ ಫಿದಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts