More

    ಗೆಳೆಯನನ್ನು ಕೊಂದು ಸಂಪ್​ನೊಳಗೆ ಹಾಕಿದ ಪಾಪಿ! ಕೊಲೆ ಮಾಡಿ ಅಸ್ಸಾಂಗೆ ಪರಾರಿ

    ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ಕೊಂದು ಸಂಪ್​ನಲ್ಲಿ ಬಿಸಾಕಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿರುವುದಾಗಿ ತಿಳಿಸಲಾಗಿದೆ.

    ಇದನ್ನೂ ಓದಿ: ಮರುಕಳಿಸಿದೆ ನಿರ್ಭಯಾ ಕೇಸ್​: ಕಬ್ಬಿಣದ ರಾಡ್​ ನೂಕಿಸಿ ಅತ್ಯಾಚಾರ ಎಸಗಿ ಕೊಲೆ!

    ಮಿಸ್ಬಾ ಹುಸೇನ್ ಲಷ್ಕರ್ (20) ಕೊಲೆಯಾದ ವ್ಯಕ್ತಿ. ಈತ ವಿಠಲ್‌ಮಲ್ಯ ರಸ್ತೆಯ ಅದರ್ಶ ಡೆವಲಪರ್ಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಹೊಸ ವರ್ಷದ ಹಿಂದಿನ‌ ದಿನ ಕೆಲಸಕ್ಕೆ ಹೋಗಿದ್ದ ಮಿಸ್ಬಾ ಅಂದಿನಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಆತನ ಮೃತದೇಹ ಸಂಪ್​ನಲ್ಲಿ ಪತ್ತೆಯಾಗಿದೆ.

    ಇದನ್ನೂ ಓದಿ: ಉನ್ನತ ಹುದ್ದೆ ಏರುವ ಯೋಗವಿದೆ ಎಂದು ಹೇಳಿ ನ್ಯಾಯಾಧೀಶೆಗೂ ಟೋಪಿ ಹಾಕಿದ ಯುವರಾಜ!

    ಗೆಳೆಯನನ್ನು ಕೊಂದು ಸಂಪ್​ನೊಳಗೆ ಹಾಕಿದ ಪಾಪಿ! ಕೊಲೆ ಮಾಡಿ ಅಸ್ಸಾಂಗೆ ಪರಾರಿ
    ಆರೋಪಿ

    ಯುವಕನ ಮೃತದೇಹ ಪತ್ತೆಯಾದ ನಂತರ ತನಿಖೆ ಚುರುಕುಗೊಳಿಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ಯುವಕನ ಕೊಲೆಯ ನಂತರ ಆತನ ರೂಂ ಮೇಟ್​ ಕಾಣೆಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆಗ ಆತ ಅಸ್ಸಾಂಗೆ ಓಡಿ ಹೋಗಿರುವುದು ಸಿಡಿಆರ್ ಚೆಕ್ ಮೂಲಕ ತಿಳಿದುಬಂದಿದೆ. ನಂತರ ಅಸ್ಸಾಂ ಪೊಲೀಸರ ಜತೆ ಸಂಪರ್ಕ ಸಾಧಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

    ಪಕ್ಕದ ಮನೆಯವನೊಂದಿಗೇ ಮಹಿಳೆಯ ಲವ್ವಿ ಡವ್ವಿ! ಪ್ರಿಯಕರನ ಕಾಟ ಹೆಚ್ಚಾದ ತಕ್ಷಣ ದರೋಡೆಯ ನಾಟಕ

    ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts