ಮುಂಬೈ: ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎನ್ನುವ ಕುತೂಹಲಕ್ಕಿನ್ನೂ ತೆರೆ ಬಿದ್ದಿಲ್ಲ. ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಹಾಗಿರುವಾಗಲೇ ಶಿವಸೇನೆಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀಗೆ ಹೊಗಳಿಕೆಯ ಸರಮಾಲೆಯನ್ನೇ ತೊಡಿಸಿದ್ದು, ಅವರೇ ಅಧ್ಯಕ್ಷರಾಗಬೇಕೆಂಬ ಇಂಗಿತ ತೋಡಿಕೊಂಡಿದೆ.
ಇದನ್ನೂ ಓದಿ: ಟ್ಯೂಷನ್ ಕ್ಲಾಸ್ಗೆ ಹೊರಟಿದ್ದ ಬಾಲಕಿಯ ಮೇಲೆ ಗ್ಯಾಂಗ್ ರೇಪ್! ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಬಾಲಕಿ
ಶಿವಸೇನೆಯ ಸಮನಾ ಪತ್ರಿಕೆಯ ಸಂಪಾದಕೀಯ ಅಂಕಣವನ್ನು ರಾಹುಲ್ ಗಾಂಧಿ ಹೊಗಳಿಕೆಗೇ ಮೀಸಲಿಡಲಾಗಿದೆ. “ಬಿಜೆಪಿಯಲ್ಲಿ ಮೋದಿ ಹೇಗೋ, ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಹಾಗೇ. ಅವರು ಕೇಂದ್ರ ಸರ್ಕಾರದ ವಿರುದ್ಧದ ನಿಜವಾದ ಹೋರಾಟಗಾರ. ಸರ್ವಾಧಿಕಾರಿಗಳು ತಮ್ಮ ವಿರುದ್ಧ ಒಬ್ಬ ವ್ಯಕ್ತಿ ಹೋರಾಟಡಿದರೂ ಭಯ ಪಡುತ್ತಾರೆ. ಅದರಲ್ಲೂ ಹೋರಾಡುತ್ತಿರುವ ವ್ಯಕ್ತಿ ಪ್ರಾಮಾಣಿಕನಾಗಿದ್ದರೆ ಭಯ ನೂರು ಪಟ್ಟಾಗುತ್ತದೆ. ಅಂತದ್ದೇ ಒಬ್ಬ ಹೋರಾಟಗಾರ ರಾಹುಲ್ ಗಾಂಧಿ. ದೆಹಲಿಯಲ್ಲಿರುವ ನಾಯಕರಿಗೆ ರಾಹುಲ್ ಗಾಂಧಿ ಕಂಡರೆ ಹೆಚ್ಚು ಭಯವಿದೆ” ಎಂದು ಸಂಪಾದಕೀಯ ಅಂಕಣದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಜೆಡಿಎಸ್ ತೊರೆಯಲು ಸಾಕಷ್ಟು ಆಫರ್ ಬಂದಿತ್ತು… ಎನ್ನುತ್ತಲೇ ದೇವೇಗೌಡರಿಗೆ ಮಾಜಿ ಶಾಸಕ ಕೊಟ್ಟ ಎಚ್ಚರಿಕೆ ಏನು?
ಕಾಂಗ್ರೆಸ್ಗೆ ರಾಹುಲ್ ಗಾಂಧಿ ಬಿಟ್ಟರೆ ಬೇರೊಬ್ಬ ಪರ್ಯಾಯ ವ್ಯಕ್ತಿ ಇಲ್ಲವೇ ಇಲ್ಲ. ಅವರನ್ನು ಅಪಹಾಸ್ಯ ಮಾಡಲಾಗುತ್ತದೆ. ಆದರೆ ಸರ್ಕಾರದ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ತಿರುಗಿ ಬೀಳುವುದು ಅವರು ಮಾತ್ರ. ಪಕ್ಷಕ್ಕೆ ಅಧ್ಯಕ್ಷ ಸ್ಥಾನಕ್ಕೆ ಅವರು ಏರಿದರೆ ಒಳಿತಾಗಲಿದೆ ಎಂದು ಶಿವಸೇನೆ ಹೇಳಿದೆ. (ಏಜೆನ್ಸೀಸ್)
ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!