ಉಡುಪಿ: ಬಡುಗುತಿಟ್ಟನ ಹೆಸರಾಂತ ಯಕ್ಷಗಾನ ಕಲಾವಿದರೊಬ್ಬರು ನಾಪತ್ತೆಯಾಗಿರುವ ವಿಷಯ ಇದೀಗ ಹೊರಬಿದ್ದಿದೆ. ಏಪ್ರಿಲ್ 21ರಿಂದ ಕಲಾವಿದರು ಕಾಣೆಯಾಗಿರುವುದಾಗಿ ತಿಳಿಸಲಾಗಿದೆ.
ಮತ್ಯಾಡಿ ಗುಡ್ಡೆಯಂಗಡಿ ನಿವಾಸಿ ಕಡಬಾಳ ಉದಯ ಹೆಗಡೆ (37) ನಾಪತ್ತೆಯಾದವರು. ಇವರು ಕರಾವಳಿಯ ಹೆಸರಾಂತ ಪೆರ್ಡೂರು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್ 21ರಂದು ಮನೆಯಿಂದ ಕಾರಿನಲ್ಲಿ ತೆರಳಿದ್ದ ಅವರು ವಾಪಾಸು ಮನೆಗೆ ಬಂದಿಲ್ಲ. ಬಂಧು ಮಿತ್ರರು, ಸ್ನೇಹಿತರು ಎಲ್ಲರ ಮನೆಯಲ್ಲೂ ವಿಚಾರಿಸಲಾಗಿದೆ. ಉದಯ ಹೆಗಡೆ ಅವರ ಫೋನ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ಭಯ ಪಟ್ಟಿರುವ ಅವರ ಪತ್ನಿ ಅಶ್ವಿನಿ ಕೊಂಡದಕುಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಉದಯ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ನಾದಿನಿ ಜತೆ ಭಾವನ ಅಕ್ರಮ ಸಂಬಂಧ! ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊತ್ತಿದ್ದ ಹೆಂಡತಿಯನ್ನೇ ಕೊಂದ ಗಂಡ!