ಗದಗ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ತೆಗಳಿದಷ್ಟೂ ಕಮಲ ಅರಳಿದೆ ಎನ್ನುವ ಮೂಲಕ ಎಲ್ಲ ಟೀಕೆಗಳಿಗೆ ಕೇಂದ್ರ ಸಚಿವ ಅಮಿತ್ ಷಾ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಗದಗದ ಲಕ್ಷ್ಮೇಶ್ವರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು ಈ ವಿಷಯ ಹೇಳಿದರು.
ಮೋದಿಯನ್ನು ಮುಟ್ಟಿದರೆ ವಿಷ ಎನ್ನುತ್ತಾರೆ. ಬಡವರ ಕಷ್ಟ ಹರಣ ಮಾಡಿದ ಮೋದಿ ವಿಷದ ಹಾವು ಎನ್ನುತ್ತಾರೆ. ಆದರೆ ಮೋದಿಯವರನ್ನು ತೆಗಳಿದಷ್ಟೂ ಕಮಲ ಅರಳಿದೆ ಎಂದು ಅಮಿತ್ ಷಾ ಹೇಳಿದ್ದಾರೆ. ಭ್ರಷ್ಟಾಚಾರ ಬಂದ್ ಮಾಡಿದರಷ್ಟೇ ಉದ್ಧಾರ ಎಂದ ಷಾ, ರಾಹುಲ್ ಗಾಂಧಿ ಉದ್ಧಾರ ಆಗಲ್ಲ ಎಂದರು.
ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಒಂದು ರೂಪಾಯಿ ಕೊಟ್ಟರೆ 25 ಪೈಸೆ ಮಾತ್ರ ಜನರಿಗೆ ಸೇರುತ್ತಿದೆ ಎಂದು ರಾಹುಲ್ ಗಾಂಧಿಯ ತಂದೆ ಹೇಳುತ್ತಿದ್ದರು ಎಂಬುದನ್ನು ಉಲ್ಲೇಖಿಸಿದ ಅಮಿತ್ ಷಾ, ಉಳಿದ ಹಣವನ್ನು ಯಾರು ತಿನ್ನುತ್ತಿದ್ದರು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್ಡಿಕೆ ಪ್ರಶ್ನೆ
ರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾದ ಮಂದಿರ ಶೀಘ್ರ ಉದ್ಘಾಟನೆ ಆಗಲಿದೆ ಎಂದ ಅಮಿತ್ ಷಾ, ಲಿಂಗಾಯತ ವಿಚಾರವನ್ನೂ ಪ್ರಸ್ತಾಪಿಸಿದರು. ಲಿಂಗಾಯತ ಮುಖ್ಯಮಂತ್ರಿಯನ್ನು ಅಪಮಾನ ಮಾಡಿ ಕೆಳಗಿಸಿದ್ದು ಕಾಂಗ್ರೆಸ್, ಈಗ ಲಿಂಗಾಯತರು ಬಿಜೆಪಿಯಿಂದ ಮುನಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಎಂದು ಷಾ ಹೇಳಿದರು.
ಕುಡಿದು ಮಲಗಿ ಸಿಕ್ಕಿಬಿದ್ದ ಕಳ್ಳ; ದೂರು ಬಂದ 11 ತಾಸೊಳಗೆ ಆರೋಪಿಯ ಬಂಧನ
4 ವರ್ಷ ಕಳೆದರೂ ಕಳವಾದ ಚಿನ್ನದ ಸರ ಪತ್ತೆ ಮಾಡಲಾಗದೆ ಹೊಸ ಸರ ಕೊಡಿಸಿದ ಪೊಲೀಸರು!; ಆಗಿದ್ದೇನು?