ರಬಕವಿ/ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಾಪುರ ಜಲಾಶಯದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ಕಳೆದ ವಾರವಷ್ಟೇ ಉತ್ತಮ ಮಳೆಯಾಗಿ ಅಂದಾಜು 23 ಸಾವಿರ ಕ್ಯೂಸೆಕ್ವರೆಗೂ ಕೃಷ್ಣೆಗೆ ನೀರು ಹರಿದು ಬರುತ್ತಿತ್ತು. ಅಲ್ಲದೆ, ಅಷ್ಟೇ ಪ್ರಮಾಣದ ನೀರನ್ನು ಹಿಪ್ಪರಗಿ ಜಲಾಶಯದಿಂದ ಹೊರ ಬಿಡಲಾಗುತ್ತಿತ್ತು.
ಆದರೆ, ಶುಕ್ರವಾರ ಬೆಳಗಿನ ಜಾವ 14 ಸಾವಿರ ಕ್ಯೂಸೆಕ್ ಇಳಿಕೆ ಕಂಡಿದೆ. ನೀರಿನ ಒಳಹರಿವಿನ ಪ್ರಮಾಣದಲ್ಲಿ ಭಾರಿ ಕುಸಿತವಾಗಿರುವ ಕಾರಣ ಮತ್ತೆ ಜನತೆ ಆತಂಕಕ್ಕೀಡಾಗಿದ್ದಾರೆ.
ಇದನ್ನೂ ಓದಿ: ನೋಡ ಬನ್ನಿ ಈ ಸರ್ಕಾರಿ ಶಾಲೆ..!
ನೀರಿನ ಸಂಗ್ರಹವಿಲ್ಲ
ಹಿಪ್ಪರಗಿಯಲ್ಲಿ ಡೆಡ್ ಸ್ಟೋರೇಜ್ನ ಮೇಲೆ ಯಾವುದೇ ರೀತಿ ನೀರನ್ನು ಹಿಡಿದಿಟ್ಟುಕೊಳ್ಳದೆ ಬಂದಷ್ಟೇ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿದ್ದಾರೆ.