ರಾಯಚೂರು: ಹೊಸ ವರ್ಷಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದ ಯುವಕರ ಬೆನ್ನ ಹಿಂದೆಯೇ ದೆವ್ವ ಹಾದುಹೋಗಿದೆ!
ಇಂತಹ ಅಚ್ಚರಿ ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಜಕ್ಕಲದಿನ್ನಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಯುವಕರು ಕೇಕ್ ಕತ್ತರಿಸುತ್ತಿದ್ದರು. ಅದನ್ನು ಮತ್ತೊಬ್ಬ ವಿಡಿಯೋ ಮಾಡಿಕೊಳ್ಳುತ್ತಿದ್ದ. ಆ ವೇಳೆ ಕೇಕ್ ಕತ್ತರಿಸುತ್ತಿದ್ದ ಯುವಕರ ಹಿಂಭಾಗದಲ್ಲಿ ಮನುಷ್ಯ ಆಕೃತಿಯ ಬಿಳಿ-ಬೂದು ಬಣ್ಣದ ನೆರಳು ಸಂಚರಿಸಿದೆ. ಈ ದೃಶ್ಯವೂ ಮೊಬೈಲ್ನಲ್ಲಿ ಸೆರೆಯಾಗಿದೆ.
ಪೆಟ್ರೋಲ್ ಬಂಕ್ ಬಳಿ ಕಾಣಿಸಿಕೊಂಡ ಈ ಆಕೃತಿಯನ್ನು ಭೂತ ಎಂದೇ ನಂಬಿದ ಜನತೆ ದಿಕ್ಕುಪಾಲಾಗಿ ಓಡಿದ್ದಾರೆ. ಇದು ಭೂತ ಛೇಷ್ಟೇಯೋ ಅಥವಾ ಬೇರೆ ಏನೋ ಎಂಬುದು ಮಾತ್ರ ಇನ್ನೂ ಖಚಿತವಾಗಿಲ್ಲ.
ಹೊಸ ವರ್ಷಾಚರಣೆ ವೇಳೆ ಕೇಕ್ ಕತ್ತರಿಸುತ್ತಿದ್ದ ಯುವಕರ ಬೆನ್ನ ಹಿಂದೆಯೇ ದೆವ್ವ ಓಡುತ್ತಿದೆ… ಈ ಭಯಾನಕ ದೃಶ್ಯದ ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ https://t.co/8e0WY5VyWa pic.twitter.com/NQRbeQOkrI
— Vijayavani (@VVani4U) January 2, 2021
ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಯುವಕರು ಕಣಕ್ಕಿಳಿಸಿದ್ದ ನಿರ್ಗತಿಕನಿಗೆ ಗೆಲುವೇ? ಸೋಲೇ?
ಗ್ರಾಪಂ ಚುನಾವಣೆ ಸೋಲಿಂದ ಕಂಗೆಟ್ಟವ ರಾತ್ರೋರಾತ್ರಿ ರಸ್ತೆಯನ್ನೇ ಬಂದ್ ಮಾಡಿದ!