More

    ತನ್ನ ಮದುವೆಗೆ ಅಪ್ಪುವನ್ನು ಕರೆಸಬೇಕೆಂದು ಕನಸು ಕಂಡಿದ್ದ, ಅಭಿಮಾನಿ: ಇದಕ್ಕೆ ಅಭಿಮಾನಿ ಮಾಡಿದ ಫ್ಲಾನ್​ಗೆ ಭಾರೀ ಮೆಚ್ಚುಗೆ

    ವಿಜಯಪುರ: ಪುನೀತ್ ರಾಜಕುಮಾರ್​ ಇಲ್ಲ ಎನ್ನುವುದು ಇನ್ನೂ ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಭಿಮಾನಿಗಳಲ್ಲಿ ಸದಾ ಅಚ್ಚಳಿಯದೇ ಉಳಿದಿರುವ ಅವರು ಎಂದೆಂದಿಗೂ ಅಮರರಾಗಿದ್ದಾರೆ ಎನ್ನುವುದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ.

    ಅಕಾಲಿಕ ನಿಧನದಿಂದ ಕರುನಾಡನ್ನೇ ದಿಗ್ಭ್ರಮೆಗೊಳಿಸಿದ್ದ ಪುನೀತ್​ ಅವರ ಅಗಲಿಕೆಯ ಸುದ್ದಿ ಇಂದಿಗೂ ನಂಬಲು ಸಾಧ್ಯವಿಲ್ಲ. ಆದರೂ ವಾಸ್ತವವನ್ನು ಅರಿತು ಮುನ್ನಡೆಯಲೇಬೇಕಿದೆ. ಇಂದು ಅವರು ಇದ್ದಿದ್ದರೆ ತಮ್ಮ ಅಭಿಮಾನಿಯ ಮದುವೆಯಲ್ಲಿ ಪಾಲ್ಗೊಂಡು ಆಶೀರ್ವದಿಸುತ್ತಿದ್ದರು.

    ಹೌದು.. ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದ ಸಾಮಾನ್ಯರಂತೆ ಜನರಲ್ಲಿ ಬೆರೆಯುತ್ತಿದ್ದ ಪುನೀತ್ ರಾಜಕುಮಾರ್​ ಅವರನ್ನು ಅಭಿಮಾನಿಗಳು ದಿನಿನಿತ್ಯ ಸ್ಮರಿಸುತ್ತಲೇ ಇರುತ್ತಾರೆ. ವಿಜಯಪುರದಲ್ಲಿರುವ ಅವರ ಅಭಿಮಾನಿಯೊಬ್ಬರು ತಮ್ಮ ಮದುವೆಯಲ್ಲಿ ಪುನೀತ್ ಅವರ ಫೋಟೋವಿಟ್ಟು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪುನೀತ್ ರಾಜಕುಮಾರ ಪೋಟೋಗಳನ್ನು ಮದುವೆ ಮಂಟಪದಲ್ಲಿ ಹಾಕಿಸಿದ ಅಭಿಮಾನಿಬಸವರಾಜ ಕಕ್ಕಳಮೇಲಿ ಹಾಗೂ ಶೋಭಾ ಅವರೊಂದಿಗೆ ವಿವಾಹವಾದರು. ಇವರ ಮದುವೆಗೆ ಪುನೀತ್​ ಅವರ ಭಾವಚಿತ್ರದ ಮಂಟಪವೇ ಮೆರುಗು ನೀಡಿತ್ತು. ಪುನೀತ್ ರಾಜಕುಮಾರ ಅಭಿಮಾನಿಯಾಗಿರೋ ಬಸವರಾಜ ಕಕ್ಕಳಮೇಲಿ,ತನ್ನ ಮದುವೆಗೆ ಅಪ್ಪುವನ್ನು ಕರೆಸಬೇಕೆಂದು ಕನಸು ಕಂಡಿದ್ದ, ಇದೀಗ ಅಪ್ಪು ಇಲ್ಲದ ಕಾರಣ ಅವರ ಪೋಟೋಗಳನ್ನು ವೇದಿಕೆ ಮೇಲೆ ಇಟ್ಟು ಮಾಂಗಲ್ಯ ಧಾರಣೆ ಮಾಡಿಕೊಂಡರು.

    ಪುನೀತ್ ರಾಜಕುಮಾರ ಎಲ್ಲಾ ಚಿತ್ರಗಳನ್ನು ಫಸ್ಟ್ ಶೋ ದಲ್ಲಿ ವೀಕ್ಷಣೆ ಮಾಡಿರೋ ಬಸವರಾಜ, ಪುನೀತ್ ಸಮಾಧಿ ಬಳಿ ಮದುವೆ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಮಾಡಿ ನಂತರ ಎಲ್ಲರಿಗೆ ಹಂಚಿದ್ದರು.ಪುನೀತ್ ಮೇಲಿನ ಬಸವರಾಜ ಅಭಿಮಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ನಗರದ ಕಾಳಿಕಾ ದೇವಸ್ಥಾನದ ಸಭಾ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮ ನಡೆದಿದ್ದು,ತಮ್ಮ ಮದುವೆಗೆ ಅಪ್ಪು ಬಂದಿದ್ದಾರೆ ಎಂಬ ಭಾವನೆ ಬರಲಿ ಎಂದು ಈ ರೀತಿ ವ್ಯವಸ್ಥೆ ಮಾಡಿದ್ದೇನೆ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ಹಿಂದಿ ಸಿನಿಮಾ ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ: ನಟ ಮಹೇಶ್​ ಬಾಬು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts