More

    ‘ರಾಮ್​ ಸೇತು’, ‘ಥ್ಯಾಂಕ್​ ಗಾಡ್​’ಗೆ ನೀರಸ ಪ್ರತಿಕ್ರಿಯೆ; ‘ಕಾಂತಾರ’ಗೆ ಹೆಚ್ಚಿದ ಬೇಡಿಕೆ

    ಮುಂಬೈ: ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರದ ಹಿಂದಿ ಅವತರಣಿಕೆಯ ನಾಗಾಲೋಟ ಇನ್ನಷ್ಟು ಮುಂದುವರೆದಿದೆ. ‘ರಾಮ್​ ಸೇತು’ ಮತ್ತು ‘ಥ್ಯಾಂಕ್​ ಗಾಡ್​’ ಚಿತ್ರಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದರಿಂದ ‘ಕಾಂತಾರ’ಕ್ಕೆ ದೊಡ್ಡ ಉಪಕಾರವಾಗಿದೆ. ಉತ್ತರ ಭಾರತದಲ್ಲಿ ಚಿತ್ರಕ್ಕೆ ಶೇ. 25ರಷ್ಟು ಪ್ರದರ್ಶನಗಳು ಹೆಚ್ಚಾಗಿವೆ.

    ಇದನ್ನೂ ಓದಿ: ಜಪಾನ್​ನಲ್ಲಿ ‘ಕೆಜಿಎಫ್​ 2’ ದಾಖಲೆಯನ್ನು ಮುರಿಯುತ್ತದೆಯೇ ‘ಆರ್​ಆರ್​ಆರ್​’?

    ‘ಕಾಂತಾರ’ ಚಿತ್ರವು ಹಿಂದಿಗೆ ಡಬ್​ ಆಗಿ ಎರಡು ವಾರಗಳ ಪ್ರದರ್ಶನ ಕಂಡಿದೆ. ಚಿತ್ರಕ್ಕೆ ಉತ್ತರ ಭಾರತದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎನ್ನುತ್ತಿರುವಾಗಲೇ ದೀಪಾವಳಿ ಬಂತು. ದೀಪಾವಳಿಯ ಸಂದರ್ಭದಲ್ಲಿ ಅಕ್ಷಯ್​ ಕುಮಾರ್​ ಅಭಿನಯದ ‘ರಾಮ್​ ಸೇತು’ ಮತ್ತು ಅಜಯ್​ ದೇವಗನ್​ ಅಭಿನಯದ ‘ಥ್ಯಾಂಕ್​ ಗಾಡ್​’ ಚಿತ್ರಗಳು ಬಿಡುಗಡೆಯಾದವು. ಇದರಿಂದ ‘ಕಾಂತಾರ’ ಚಿತ್ರದ ಕಲೆಕ್ಷನ್​ಗೆ ಏಟು ಬೀಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಉಲ್ಟಾ ಆಗಿದೆ. ಆ ಎರಡು ಚಿತ್ರಗಳು ಸುಮಾರು ಎಂಬ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ‘ಕಾಂತಾರ’ಕ್ಕೆ ಬೇಡಿಕೆ ಹೆಚ್ಚಿದೆ.

    ‘ರಾಮ್​ ಸೇತು’ ಮತ್ತು ‘ಥ್ಯಾಂಕ್​ ಗಾಡ್​’ ಚಿತ್ರಗಳಿಗೆ ಈಗಾಗಲೇ ಪ್ರೇಕ್ಷಕರ ಅಭಾವ ಕಾಡುತ್ತಿದೆ. ನಾಳೆ ಸೋಮವಾರದಿಂದ ಅದು ಇನ್ನಷ್ಟು ಹೆಚ್ಚಾಗಬಹುದು ಮತ್ತು ಚಿತ್ರಮಂದಿರಗಳು ಖಾಲಿ ಹೊಡೆಯಬಹುದು ಎಂಬ ಭಯ ಚಿತ್ರಮಂದಿರದವರನ್ನು ಕಾಡುತ್ತಿದೆ. ಹಾಗಾಗಿ, ಬಹಳ ಚಿತ್ರಮಂದಿರದವರು ಆ ಎರಡು ಚಿತ್ರಗಳನ್ನು ಬದಲಾಯಿಸಿ, ಬೇಡಿಕೆ ಇರುವ ‘ಕಾಂತಾರ’ ಚಿತ್ರವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಒಂದು ಕಾಲಕ್ಕೆ ಅಕ್ಷಯ್​ ಕುಮಾರ್ ಚಿತ್ರಗಳೆಂದರೆ ಅದು 100 ಕೋಟಿ ಕ್ಲಬ್​ ಚಿತ್ರಗಳು ಎಂಬ ಮಾತಿತ್ತು. ಆದರೆ, ‘ರಾಮ್​ ಸೇತು’ ಒಂದು ವಾರದಲ್ಲಿ 57 ಕೋಟಿ ರೂ. ಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು, ‘ಥ್ಯಾಂಕ್​ ಗಾಡ್​’ ಚಿತ್ರವು 27 ಕೋಟಿಯಷ್ಟೇ ಗಳಿಸಬಹುದು ಎನ್ನಲಾಗಿದೆ. ಆದರೆ, ‘ಕಾಂತಾರ’ದ ಮೂರನೆಯ ವಾರದಲ್ಲೂ ಕಲೆಕ್ಷನ್​ ಕಡಿಮೆಯಾಗಿಲ್ಲ. ಇನ್ನೂ ಚಿತ್ರಕ್ಕೆ ಡಿಮ್ಯಾಂಡ್​ ಹೆಚ್ಚಿದ್ದು, ಬಹಳಷ್ಟು ಚಿತ್ರಮಂದಿರದವರು ‘ಕಾಂತಾರ’ ಚಿತ್ರವನ್ನು ಪ್ರದರ್ಶಿಸುವುದಕ್ಕೆ ಮುಂದಾಗಿದ್ದಾರೆ. ಇಲ್ಲಿ ‘ಕಾಂತಾರ’ ಗೆಲ್ಲುವುದಕ್ಕೆ ಇನ್ನೊಂದು ಕಾರಣವೂ ಇದೆ. ಚಿತ್ರ ಚೆನ್ನಾಗಿದೆ ಎಂಬ ಅಭಿಪ್ರಾಯದ ಜತೆಗೆ ಚಿತ್ರದ ಪ್ರವೇಶ ದರ ಕಡಿಮೆ ಇರುವುದರಿಂದ ಜನ ಮುಗಿಬಿದ್ದು ‘ಕಾಂತಾರ’ ಚಿತ್ರವನ್ನು ನೋಡುತ್ತಿದ್ದಾರೆ.

    ಇದನ್ನೂ ಓದಿ: ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರ ‘ಕೆಡಿ’ಗೆ ಶ್ರೀಲೀಲಾ ನಾಯಕಿ?

    ‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

    ಇಂದು ‘ಗಂಧದ ಗುಡಿ’ ವೀಕ್ಷಿಸಲಿರುವ 120 ಜನರ ‘ಮಾದೇವ’ ಚಿತ್ರತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts