More

    ಬೈಕ್ ಹಾಗೂ ಆ್ಯಂಬುಲೆನ್ಸ್ ನಡುವೆ ಭೀಕರ ಅಪಘಾತ; ದ್ವಿಚಕ್ರ ಸವಾರ ಮೃತ್ಯು

    ಕೊಡಗು: ಬೈಕ್ ಹಾಗೂ ಆ್ಯಂಬುಲೆನ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದ್ವಿಚಕ್ರ ಸವಾರ ಲೋಕೇಶ್(44) ಎಂಬಾತ ಸಾವನ್ನಪ್ಪಿದ್ದಾನೆ.

    ಮೃತ ಲೋಕೇಶ್ ಚೆಟ್ಟಳ್ಳಿ ನಿವಾಸಿಯಾಗಿದ್ದು, ಕಾಫಿ ಬೋರ್ಡ್ ಉದ್ಯೋಗಿಯಾಗಿದ್ದ. ಮಡಿಕೇರಿ ಸಮೀಪದ ಕತ್ತಲೆಕಾಡು ಬಳಿ‌ ನಡೆದ ಅಪಘಾತ ಸಂಭವಿಸಿದ್ದು, ಅಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಲೋಕೇಶ್ ಅಸುನೀಗಿದ್ದಾನೆ.

    ಲೋಕೇಶ್​ ಬೈಕ್​ನಲ್ಲಿ ಮಡಿಕೇರಿಯಿಂದ ಚೆಟ್ಟಳಿಗೆ ತೆರಳುತ್ತಿದ್ದ. ಚೆಟ್ಟಳಿಯಿಂದ ಮಡಿಕೇರಿಗೆ ಬರುತ್ತಿದ್ದ ಆ್ಯಂಬುಲೆನ್ಸ್ ಢಿಕ್ಕಿಯಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಇತರೆ ಅಪಘಾತ ಸುದ್ದಿಗಳು:

    ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ; ಸವಾರಿಬ್ಬರು ಚಿಂತಾಜನಕ

    ತಮಿಳುನಾಡು: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತವಾಗಿದ್ದು, ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರು- ಬಾಗಲೂರು ರಸ್ತೆಯಲ್ಲಿ ಘಟನೆ ನಡೆದಿದೆ. ಕಳಸಾಪುರ ಗ್ರಾಮದ ಸಮೀಪ ಬೈಕ್​ನಲ್ಲಿ ವೃದ್ಧ ರಸ್ತೆ ದಾಟುತ್ತಿದ್ದ. ಈ ವೇಳೆ ಅತಿವೇಗವಾಗಿ ಬಂದ ಮತ್ತೊಂದು ಬೈಕ್ ವೃದ್ದನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಚಿಕಿತ್ಸೆಗಾಗಿ ಗಾಯಾಳುಗಳನ್ನು ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸವಾರರಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಬಾಗಲೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಯಚೂರಿನಲ್ಲಿ ಕಾರು-ಬೈಕ್ ನಡುವೆ ಅಪಘಾತ; ಆರ್​ಟಿಓ ಸಿಬ್ಬಂದಿ ಮೃತ್ಯು

    ರಾಯಚೂರು: ಸ್ಕಾರ್ಪಿಯೋ ಕಾರು ಮತ್ತು ಬೈಕ್ ಮಧ್ಯೆ ಉಂಟಾದ ಅಪಘಾತದಿಂದ ಆರ್​ಟಿಓ ಸಿಬ್ಬಂದಿ ಮೃತ ಪಟ್ಟಿರುವ ಘಟನೆ ನಗರದ ಆರ್​ಟಿಓ ಸರ್ಕಲ್​ನಲ್ಲಿ ನಡೆದಿದೆ. ಚಂದ್ರಕಾಂತ್(34) ಮೃತ ಆರ್​ಟಿಓ ಸಿಬ್ಬಂದಿ. ಚಂದ್ರಕಾಂತ್ ಜತೆಗೆ ಬೈಕ್​ನಲ್ಲಿದ್ದ ನಿಲೇಶ್ ಅಪಘಾತದಿಂದ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಆರ್​​ಟಿಓ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಚಂದ್ರಕಾಂತ್, ಬೈಕ್​ನಲ್ಲಿ ಆರ್​​ಟಿಓ ಸರ್ಕಲ್​ನಿಂದ ಬಿಆರ್​ಬಿ ಸರ್ಕಲ್​ಗೆ ತೆರಳುತ್ತಿದ್ದರು. ಈ ವೇಳೆ ಆರ್​ಟಿಓ ಸರ್ಕಲ್ ಕಡೆಗೆ ಬರುತ್ತಿದ್ದ ಸ್ಕಾರ್ಪಿಯೋ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್​ಗೆ ಡಿಕ್ಕಿಯಾಗಿದೆ. ಸದ್ಯ ಸ್ಕಾರ್ಪಿಯೋ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ಬಗ್ಗೆ ರಾಯಚೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts