ತೇರದಾಳ: ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವುದನ್ನು ಖಂಡಿಸಿ ತೇರದಾಳದಲ್ಲಿ ಸೋಮವಾರ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಂಟಿಯಾಗಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಶ್ರೀಕಾಂತ ಮಾಯನ್ನವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರು ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ರಾಜ್ಯಗಳಲ್ಲಿ ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿದ್ದು ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅನ್ಯಾಯಕ್ಕೆ ಒಳಗಾದವರಿಗೆ ಯಾವುದೇ ನ್ಯಾಯ ಸಿಗುತ್ತಿಲ್ಲ. ಕೂಡಲೇ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಪ್ರವೀಣ ನಾಡಗೌಡ, ಪಿ.ಎಸ್. ಮಾಸ್ತಿ, ಅಶೋಕ ಆಳಗೊಂಡ, ದಯಾನಂದ ಕಾಳೆ, ಸಿದ್ದು ದೊಡಮನಿ, ಶಿವಾನಂದ ನಡುವಿನಕೇರಿ, ರಾಜು ಸರಿಕರ, ಯಾಜ್ ಇನಾಂದಾರ, ಮುಸ್ತಾ ಮೋಮಿನ, ಆದಿನಾಥ ಸಪ್ತಸಾಗರ, ಸದಾಶಿವ ಹಟ್ಟಿ, ಸದಾಶಿವ ಸಿಂಗೆ, ಸಂಜು ಮುಗಳಖೋಡ, ಹನುಮಂತ ಜಗದಮನಿ, ರವೀಂದ್ರ ಸರಿಕರ, ರವೀಂದ್ರ ದೊಡಮನಿ ಸೇರಿ ಇತರರಿದ್ದರು.