More

    ಆತ್ಮಹತ್ಯೆಗೆ ಶರಣಾದ ಪ್ರಖ್ಯಾತ ಕಿರುತೆರೆ ನಟಿ: ಬಯಲಾಯ್ತು ಟಿಕ್​ಟಾಕ್​ ಗೆಳೆಯನ ಕರಾಳ ಮುಖ?!

    ಹೈದರಾಬಾದ್​: ಪ್ರಖ್ಯಾತ ಟಿವಿ ಧಾರಾವಾಹಿ ಮತ್ತು ಸಿನಿಮಾ ನಟಿ ಶ್ರಾವಣಿ ಕೊಂಡಪಲ್ಲಿ (26) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಹೈದಾರಬಾದಿನಲ್ಲಿ ನಡೆದಿದೆ.

    ಎಸ್​ಆರ್​ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಮಧುರನಗರ ಏರಿಯಾದಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಶ್ರಾವಣಿ ಶವ ಪತ್ತೆಯಾಗಿದೆ. ಅವರ ಮೃತದೇಹವನ್ನು ಶವಪರೀಕ್ಷೆಗಾಗಿ ಒಸ್ಮಾನಿಯಾ ಜನರಲ್​ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಾನಸು ಮಮತಾ ಮತ್ತು ಮೌನರಾಗಂ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ಶ್ರಾವಣಿ ನಟಿಸಿದ್ದರು.

    ವ್ಯಕ್ತಿಯೊಬ್ಬನ ಕಿರುಕುಳದಿಂದ ಬೇಸತ್ತು ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆರೋಪಿಯನ್ನು ದೇವರಾಜ್​ ರೆಡ್ಡಿ ಎಂದು ಗುರುತಿಸಲಾಗಿದೆ. ಕಾಕಿನಾಡದ ಗೊಲ್ಲಪ್ರೊಲು ನಿವಾಸಿಯಾಗಿರುವ ಈತ ಟಿಕ್​ಟಾಕ್​ ಆ್ಯಪ್​ನಲ್ಲಿ ಕೆಲ ವರ್ಷಗಳ ಹಿಂದೆ ಶ್ರಾವಣಿಗೆ ಪರಿಚಯವಾಗಿದ್ದ. ತನ್ನನ್ನು ತಾನು ಅನಾಥನೆಂದು ಪರಿಚಯ ಮಾಡಿಕೊಂಡಿದ್ದ ದೇವರಾಜ್​ ದಿನ ಕಳೆದಂತೆ ಶ್ರಾವಣಿಗೆ ಹತ್ತಿರವಾಗಿದ್ದ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಸಿನಿಪ್ರಿಯರಿಗೆ ಗುಡ್ ನ್ಯೂಸ್, ಚಿತ್ರಮಂದಿರ ಓಪನ್​ಗೆ ಡೇಟ್​ ಫಿಕ್ಸ್

    ಮಾಧ್ಯಮಗಳೊಂದಿಗೆ ಮಾತನಾಡಿರುವ ಶ್ರಾವಣಿ ಸಹೋದರ ಶಿವ ಕೊಡಪಲ್ಲಿ, ದೇವರಾಜ್​ ಹಣಕ್ಕಾಗಿ ನನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ. ಕೆಲವೊಂದು ವಿಡಿಯೋಗಳನ್ನು ಇಟ್ಟುಕೊಂಡು ಶ್ರಾವಣಿಗೆ ಬೆದರಿಕೆ ಹಾಕುತ್ತಿದ್ದ. ಒತ್ತಡದಲ್ಲಿರುವುದಾಗಿ ಮತ್ತು ಬ್ಲ್ಯಾಕ್​ಮೇಲ್​ ಕುರಿತು ನನ್ನೊಂದಿಗೆ ಹೇಳಿಕೊಂಡಿದ್ದಳು. ಈ ಮೊದಲು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳಂತೆ. ಆದರ, ಇದೀಗ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆಂದು ಹೇಳಿದ್ದಾರೆ.

    ಇದೀಗ ಶ್ರಾವಣಿ ಪಾಲಕರು ದೇವರಾಜ್​ ವಿರುದ್ಧ ಎಸ್​ಆರ್​ ನಗರದಲ್ಲಿ ಕಿರುಕುಳ ನೀಡಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾನೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಇನ್ಸ್​ಪೆಕ್ಟರ್​, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಅಂದಹಾಗೆ ಕೆಲ ಚಿತ್ರಗಳಲ್ಲೂ ನಟಿಸಿರುವ ಶ್ರಾವಣಿ ಕಳೆದ 8 ವರ್ಷಗಳಿಂದ ಇಂಡಸ್ಟ್ರಿಯ ಭಾಗವಾಗಿದ್ದರು. (ಏಜೆನ್ಸೀಸ್​)

    ಚೀನಾದಿಂದ ಬಂದ ಯಾಕ್​ ಪ್ರಾಣಿಗಳ ಹಿಂಡಿನ ಮೇಲೆ ಅನುಮಾನ? ಇದಕ್ಕೆ ಕಾರಣವೂ ಇದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts