More

    ತೆಲಂಗಾಣ ನೆರೆಹಾವಳಿಗೆ ತೆಲುಗು ನಟರಿಂದ ನೆರವು; ಪವನ್​ ಕಲ್ಯಾಣ್ 1 ಕೋಟಿ, ಪ್ರಭಾಸ್​ 1.5 ಕೋಟಿ!!

    ತೆಲಂಗಾಣ: ಮಳೆ ಆರ್ಭಟಕ್ಕೆ ಕರ್ನಾಟಕ ಮತ್ತು ಪಕ್ಕದ ಆಂಧ್ರಪ್ರದೇಶ ರಾಜ್ಯಗಳು ನಲುಗಿವೆ. ಕೋಟ್ಯಂತರ ರೂ ಹಾನಿ ಸಂಭವಿಸಿದೆ. ಜನ ಜೀವನ ಅಸ್ತವ್ಯಸ್ಥಗೊಂಡಿದೆ. ನೀರು, ಆಹಾರ ಸಿಗದೆ ಜನ ಕಂಗಲಾಗಿದ್ದಾರೆ. ಇದೆಲ್ಲವನ್ನು ಕಂಡ ಟಾಲಿವುಡ್​ ಸಿನಿಮಾರಂಗದ ಸ್ಟಾರ್ ಕಲಾವಿದರು ನೆರವಿನ ಹಸ್ತ ಚಾಚಿದ್ದಾರೆ.

    ಇದನ್ನೂ ಓದಿ: ‘ಬಾಹುಬಲಿ 2’ ಬಿಡುಗಡೆಯಾದ ದಿನದಂದೇ ‘ರಾಧೇ ಶ್ಯಾಮ್​’?

    ಹೌದು, ಟಾಲಿವುಡ್​ ನಟ ಪವನ್​ ಕಲ್ಯಾಣ್​ ನೆರೆಹಾವಳಿಯಿಂದ ಸಂತ್ರಸ್ತರಾದವರಿಗೆ ಒಂದು ಕೋಟಿ ಮೊತ್ತವನ್ನು ಪರಿಹಾರದ ರೂಪದಲ್ಲಿ ನೀಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಮೊತ್ತವನ್ನು ನೀಡಿದ್ದು, ಅಭಿಮಾನಿವಲಯದಲ್ಲೂ ಪವನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇದನ್ನೂ ಓದಿ: ‘ಜನ ಗಣ ಮನ’ ಎನ್ನುತ್ತಿದ್ದ ಪೃಥ್ವಿರಾಜ್​ಗೆ ಕರೊನಾ ಪಾಸಿಟಿವ್​

    ಅದೇ ರೀತಿ ನಟ ಪ್ರಭಾಸ್ 1.5 ಕೋಟಿ, ಮೆಗಾಸ್ಟಾರ್ ಚಿರಂಜೀವಿ 1 ಕೋಟಿ, ಮಹೇಶ್​ ಬಾಬು ಒಂದು ಕೋಟಿ, ಜೂ. ಎನ್​ಟಿಆರ್ ಮತ್ತು ಅಕ್ಕಿನೇನಿ ನಾಗಾರ್ಜುನ ತಲಾ 50 ಲಕ್ಷ, ವಿಜಯ ದೇವರಕೊಂಡ 10 ಲಕ್ಷ, ರಾಮ್​ ಪೋತಿನೇನಿ 25 ಲಕ್ಷ, ನಿರ್ದೇಶಕ ತ್ರಿವಿಕ್ರಮ್ 10 ಲಕ್ಷ ರೂ. ನೀಡಿದ್ದಾರೆ. (ಏಜೆನ್ಸೀಸ್​)

    ತುಂಬು ಗರ್ಭಿಣಿ ಮೇಘನಾ ಆಸ್ಪತ್ರೆಗೆ ದಾಖಲು: ಸಿಹಿಸುದ್ದಿ ನಿರೀಕ್ಷೆಯಲ್ಲಿ ಸರ್ಜಾ ಕುಟುಂಬ! ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts