More

    ಶಿಕ್ಷಕರಿಂದ ಸೌಲಭ್ಯ ದರ್ಬಳಕೆ ತಡೆಯಿರಿ

    ಲಿಂಗಸುಗೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡು ಗೈರಾದವರಿಗೂ ಹಾಜರಾತಿ ನೀಡಿ ಶಿಕ್ಷಣ ಇಲಾಖೆ ಸೌಲಭ್ಯ ದುರ್ಬಳಕೆ ಮಾಡುತ್ತಿರುವ ಶಿಕ್ಷಕರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಎಸಿ ಕಚೇರಿ ಎಫ್‌ಡಿಸಿ ಮಲ್ಲಿಕಾರ್ಜುನಗೆ ಸರ್ಜಾಪುರ ಗ್ರಾಮಸ್ಥರು ಶುಕ್ರವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಸಂಘದಿಂದ ಶಿಕ್ಷಕರಿಗೆ ಉತ್ತಮ ರೀತಿ ಸೇವೆ

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇರೆ ಜಿಲ್ಲೆಗಳ ಹಾಗೂ ಪಟ್ಟಣದಲ್ಲಿ ವಾಸಿಸುವ ಮಕ್ಕಳ ಹೆಸರು ನೋಂದಣಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಾಮೀಣ ಕೃಪಾಂಕ, 371(ಜೆ) ಮೀಸಲಾತಿ ಸೌಲಭ್ಯ ಕಲ್ಪಿಸಲು ಸಹಕಾರ ನೀಡಲಾಗುತ್ತಿದೆ. ಸರ್ಕಾರದಿಂದ ನೀಡುವ ಸಮವಸ್ತ್ರದ ಬಟ್ಟೆ, ಬೂಟು, ಬಿಸಿಯೂಟ ಸೌಲಭ್ಯ ಕಬಳಿಸಲಾಗುತ್ತಿದೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts