ನವದೆಹಲಿ: ಕರೊನಾಗಾ ಆಯುರ್ವೇದದಲ್ಲಿಯೇ ಉಪಶಮನವಿದೆ ಎಂದು ಪಂಡಿತರು ವಾದಿಸುತ್ತಲೇ ಬಂದಿದ್ದಾರೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಕರೊನಾವನ್ನು ದೂರವಿಡಬಹುದು ಎನ್ನುವುದು ಗೊತ್ತಿರುವ ಸಂಗತಿ. ಇದೇ ಅಂಶಗಳನ್ನು ಮುಂದಿಟ್ಟುಕೊಂಡು ಚಿಕಿತ್ಸಾ ಕ್ರಮಗಳನ್ನು ರೂಪಿಸಲಾಗುತ್ತಿದೆ.
ಅಂತೆಯೇ, ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಜಿಯ ತಜ್ಞರು ಗ್ರೀನ್ ಟೀ ಹಾಗೂ ಬ್ಲ್ಯಾಕ್ ಟೀ ಹಾಗೂ ಆಯುರ್ವೇದದ ತ್ರಿಫಲದಲ್ಲಿ ಕರೊನಾವನ್ನು ದೂರವಿಡುವ ಶಕ್ತಿ ಇದೆ ಎಂದು ಕಂಡು ಹಿಡಿದಿದ್ದಾರೆ.
ಇದನ್ನೂ ಓದಿ; ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!
ಐಐಟಿಯ ಕುಸುಮಾ ಸ್ಕೂಲ್ ಆಫ್ ಬಯಾಲಾಜಿಕಲ್ ಸೈನ್ಸ್ನ (ಕೆಎಸ್ಬಿಎಸ್) ಈ ಸಂಶೋಧನೆ ನಡೆಸಿದೆ. ಕರೊನಾ ವೈರಸ್ನಲ್ಲಿರುವ ಪ್ರೋಟೀನ್ಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಪರೀಕ್ಷೆಯಲ್ಲಿ ಈ ಫಲಿತಾಂಶ ಕಂಡು ಬಂದಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರೊ. ಅಶೋಕ್ಕುಮಾರ್ ಪಟೇಲ್ ನೇತೃತ್ವದ ತಂಡ ಈ ಪ್ರಯೋಗ ನಡೆಸಿತ್ತು. ಒಟ್ಟು 51 ಔಷಧೀಯ ಸಸ್ಯಗಳನ್ನು ಈ ಪ್ರಯೋಗಕ್ಕೆ ಬಳಸಿಕೊಳ್ಳಲಾಗಿತ್ತು. ಚಹಾ ಹಹಾಗೂ ತ್ರಿಫಲದ ಜಲೀಯ ಸಾರದಿಂದ ನಿಗದಿತ ಪ್ರೋಟೀನ್ ಗುರಿಯಾಗಿಸಿಕೊಂಡರೆ ವೈರಸ್ ಬೆಳವಣಿಗೆಯನ್ನು ಸ್ಥಗಿಸಗೊಳಿಸಬಹುದು. ವೈರಸ್ ನಿಯಂತ್ರಕ ಚಟುವಟಿಕೆಯನ್ನು ಉತ್ತೇಜಿಸಲಿದೆ ಎಂಬುದನ್ನು ಕಂಡುಕೊಂಡಿದೆ.
ಇದನ್ನೂ ಓದಿ; ರೋಗ ಪ್ರತಿರೋಧಕ ಶಕ್ತಿ ಕುಂದಿದವರಿಗೂ ಆಕ್ಸ್ಫರ್ಡ್ ಕರೊನಾ ಲಸಿಕೆ ಸುರಕ್ಷಿತ; ಫಲಿತಾಂಶ ಪ್ರಕಟಿಸಿದ ತಜ್ಞರು
ನಿಯಮಿತವಾಗಿ ಬ್ಲ್ಯಾಕ್ ಟೀ ಹಾಗೂ ಗ್ರೀನ್ ಟೀ ಹಾಗೂ ತ್ರಿಫಲದ ಕಷಾಯ ಕುಡಿಯುತ್ತಿದ್ದರೆ ರೋಗ ಬಾಧೆ ದೂರವಾಗಲಿದೆ. ಈ ಸಂಶೋಧನೆಯ ವರದಿಯನ್ನು ಉನ್ನತಮಟ್ಟದ ಪರಾಮರ್ಶೆಗೆ ಸಲ್ಲಿಸಲಾಗಿದೆ ಎಂದು ಐಐಟಿ ತಂಡ ತಿಳಿಸಿದೆ.
ನೆಗಡಿ, ಕೆಮ್ಮಿನಷ್ಟೇ ಕಾಮನ್ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್ಫರ್ಡ್ ವಿವಿ ತಜ್ಞರ ಅಭಿಮತ