ನೆಲಮಂಗಲ: ತ್ಯಾಮಗೊಂಡ್ಲುವಿನಲ್ಲಿ ನೀರಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ವ್ತಕ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ಚಂದ್ರಮೌಳೇಶ್ವರ ದೇವಾಲಯದ ಬಳಿ ಇರುವ 40 ಅಡಿ ಆಳದ ಬಾವಿಗೆ ಕುಮಾರ್ ಎಂಬುವವರು ಬಿದ್ದರು.
ಗಾಯಗೊಂಡ ಅವರು ನೆರವಿಗಾಗಿ ಸಾರ್ವಜನಿಕರ ಮೊರೆ ಹೋದರು. ಕುಮಾರ್ ಬಾವಿಗೆ ಬಿದ್ದಿರುವುದನ್ನು ಗಮನಸಿದ ಸಾರ್ವಜನಿಕರು ಅವರನ್ನು ರಕ್ಷಣೆ ಮಾಡಲು ಮುಂದಾದರೂ ಸಾಧ್ಯವಾಗಲಿಲ್ಲ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದರು. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಕುಮಾರ್ನನ್ನು ರಕ್ಷಣೆ ಮಾಡಿದರು.
ತರಚಿದ ಗಾಯವಾಗಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
VIDEO| ವಿದ್ಯಾರ್ಥಿನಿ ಸಾವಿನಿಂದ ರೊಚ್ಚಿಗೆದ್ದ ಸಾರ್ವಜನಿಕರಿಂದ ಲಾರಿಗೆ ಬೆಂಕಿ