ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ನಾಳೆಗೆ ಎರಡು ತಿಂಗಳುಗಳಾಗುತ್ತವೆ. ಜೂನ್ 14ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಎರಡು ತಿಂಗಳುಗಳಲ್ಲಿ ಸುಶಾಂತ್ ಸಾವು ಅದೆಷ್ಟು ವಿಚಿತ್ರ ತಿರುವುಗಳನ್ನು ಪಡೆದುಕೊಂಡಿವೆಯೋ, ಆ ನಂತರ ಏನೆಲ್ಲಾ ಬೆಳವಣಿಗೆಗಳಾಗಿವೆಯೋ ಎಂದು ಹೇಳುವುದು ಕಷ್ಟ ಆಗುತ್ತದೆ.
ಹಾಗೆ ನೋಡಿದರೆ, ಸುಶಾಂತ್ ಅವರು ಬದುಕಿದ್ದಾಗ ಜನಪ್ರಿಯರಾಗುವುದಕ್ಕಿಂತ, ಸತ್ತ ಮೇಲೆಯೇ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಮಜೀದ್ ಮೆನನ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಸುಶಾಂತ್ ಸತ್ತ ನಂತರ ಪ್ರತಿ ದಿನ ಸುದ್ದಿಯಲ್ಲಿದ್ದೇ ಇದ್ದಾರೆ. ಬಹುಶಃ ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಹ ಮೀರಿಸುತ್ತಾರೆ ಎಂದು ಕಾಣುತ್ತದೆ. ನಿಜ ಹೇಳಬೇಕೆಂದರೆ, ಅವರು ಬದುಕಿದ್ದಾಗಲೂ ಇಷ್ಟು ಜನಪ್ರಿಯರಾಗಿರಲಿಲ್ಲ. ಸತ್ತ ನಂತರ ಬಹಳ ಜನಪ್ರಿಯರಾಗಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ರೋರಿಚ್ ಎಸ್ಟೇಟ್ ಬದಲು ಹೆಸರಘಟ್ಟದಲ್ಲಿ ಫಿಲ್ಮ್ಸಿಟಿ ನಿರ್ಮಾಣ … ಡಿಸಿಎಂ ಆಶ್ವಾಸನೆ
ಮೆನನ್ ಅವರ ಈ ಹೇಳಿಕೆ ಬಗ್ಗೆ, ಈಗಾಗಲೇ ಚರ್ಚೆ ಶುರುವಾಗಿದ್ದು, ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತಕ್ಷಣವೇ ಹೇಳಿಕೊಂಡಿದೆ.
ಆದರೆ, ತಮ್ಮ ಹೇಳಿಕೆ ಯಾವುದೇ ದುರುದ್ದೇಶದಿಂದ ಕೂಡಿಲ್ಲ ಎಂದು ಸ್ವತಃ ಮೆನನ್ ಹೇಳಿದ್ದಾರೆ. ‘ನಾನು ಯಾವುದೇ ದುರುದ್ದೇಶದಿಂದ ಈ ರೀತಿ ಹೇಳಿಲ್ಲ. ಅವರಿಗೆ ನ್ಯಾಯ ಸಿಗಬೇಕು ಎಂದು ನನಗೂ ಆಸೆ ಇದೆ. ಆದರೆ, ಅವರ ಸಾವಿನ ವಿಚಾರವಾಗಿ ಪ್ರತಿದಿನ ಒಂದಲ್ಲಾ ಒಂದು ಸುದ್ದಿಗಳು ಬರುತ್ತಿವೆಯಲ್ಲಾ, ಹಾಗಾಗಿ ಹೇಳಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.
ದಿ ನ್ಯೂಸ್ ಪ್ರಾಸ್ಟಿಟ್ಯೂಟ್: ಅರ್ನಬ್ ಬಗ್ಗೆ ಚಿತ್ರ ಘೋಷಿಸಿದ ವರ್ಮಾ