ಹಿರಿಯ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ವಿರುದ್ಧ ತಿರುಗಿಬಿದ್ದಿರುವುದು ಗೊತ್ತಿರುವ ವಿಚಾರವೇ. ಇದೇ ಭರದಲ್ಲಿ, ಅರ್ನಬ್ ಕುರಿತು ಒಂದು ಚಿತ್ರವನ್ನು ಮಾಡುವುದಾಗಿ ಘೋಷಿಸಿದ್ದರು ವರ್ಮಾ. ಅದರಂತೆ ಅವರು ‘ದಿ ನ್ಯೂಸ್ ಪ್ರಾಸ್ಟಿಟ್ಯೂಟ್’ ಎಂಬ ಚಿತ್ರವನ್ನು ಘೋಷಿಸಿದ್ದಾರೆ.
ಈ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ ವರ್ಮಾ. ಚಿತ್ರದ ಪೋಸ್ಟರ್ ಶೇರ್ ಮಾಡಿಕೊಳ್ಳುವುದರ ಜತೆಗೆ, ‘ಒಬ್ಬ ವೇಶ್ಯೆ ಬೇರೆಯವರ ಮನರಂಜಿಸುವುದಕ್ಕೆ ತನ್ನ ಬಟ್ಟೆ ತೆಗೆಯುತ್ತಾಳೆ. ಆದರೆ, ಇವನು ತನ್ನ ಮನರಂಜನೆಗಾಗಿ ಬೇರೆಯವರ ಬಟ್ಟೆ ತೆಗೆಯುತ್ತಾನೆ’ ಎಂದು ವರ್ಮಾ ಬರೆದುಕೊಂಡಿದ್ದಾರೆ.
ಇಷ್ಟು ಬಿಟ್ಟರೆ, ಅರ್ನಬ್ಗೆ ಚಿತ್ರ ಯಾವಾಗ ಪ್ರಾರಂಭವಾಗುತ್ತದೆ? ಅರ್ನಬ್ ಪಾತ್ರದಲ್ಲಿ ಯಾರು ನಟಿಸುತ್ತಾರೆ? ಚಿತ್ರದ ಕಥೆ ಏನು? ಎಂಬ ವಿಷಯದ ಬಗ್ಗೆಯೂ ಅವರು ಬಹಿರಂಗಗೊಳಿಸಿಲ್ಲ. ಕೆಲವು ದಿನಗಳ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ಅವರು, ‘ಅರ್ನಬ್ ಬಗ್ಗೆ ಸಿನಿಮಾ ಮಾಡಿ, ಆತ ಎಂತಹ ವ್ಯಕ್ತಿ ಎಂದು ತೋರಿಸುತ್ತೇನೆ. ಆತನನ್ನು ಬೆತ್ತಲು ಮಾಡುತ್ತೇನೆ’ ಎಂದು ವರ್ಮಾ ಶಪಥ ಮಾಡಿದ್ದರು. ಅದರಂತೆ ಈಗ ಅವರು ಅರ್ನಬ್ ಕುರಿತು ಚಿತ್ರ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಂಜಯ್ ದತ್ ಅನಾರೋಗ್ಯ: ಇನ್ನಷ್ಟು ತಡವಾಗುತ್ತದಾ ‘ಕೆಜಿಎಫ್ – ಚಾಪ್ಟರ್ 2’?
ಇಷ್ಟಕ್ಕೂ ವರ್ಮಾಗೆ ಯಾಕೆ ಅರ್ನಬ್ ಬಗ್ಗೆ ಸಿಟ್ಟು? ಅದರಲ್ಲೂ ಅವರ ಬಗ್ಗೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದೇಕೆ? ಎಂಬ ಪ್ರಶ್ನೆ ಸಹಜವೇ. ಅದಕ್ಕೆ ಕಾರಣವೂ ಇದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅರ್ನಬ್ ಬಾಲಿವುಡ್ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರಂತೆ. ಅವರ ಮಾತುಗಳನ್ನು ಕೇಳಿ ಕೆರಳಿರುವ ವರ್ಮಾ, ಅನರ್ಬ್ ವಿರುದ್ಧ ಹರಿಹಾಯ್ದಿರುವುದಷ್ಟೇ ಅಲ್ಲ, ಮಿಕ್ಕ ಸೆಲೆಬ್ರಿಟಿಗಳು ಯಾಕೆ ಬಾಯಿಮುಚ್ಚಿಕೊಂಡು ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು.
ಅಷ್ಟೇ ಅಲ್ಲ, ಈ ಕುರಿತು ಸರಣಿ ಟ್ವೀಟ್ಗಳನ್ನು ಮಾಡಿದ್ದರು. ಈ ವಿಚಾರವಾಗಿ ಕರಣ್ ಜೋಹರ್, ಮಹೇಶ್ ಭಟ್, ಶಾರೂಖ್ ಖಾನ್, ಆದಿತ್ಯ ಚೋಪ್ರಾ, ಸಲ್ಮಾನ್ ಖಾನ್ ಮುಂತಾದವರನ್ನು ಅವರು ಪ್ರಶ್ನಿಸಿದ್ದರು.
‘ನೀವೆಲ್ಲಾ ಅವರಿಗೆ ಯಾಕೆ ಅಷ್ಟು ಹೆದರುತ್ತೀರಾ ಎಂಬುದು ಅರ್ಥವಾಗುತ್ತಿಲ್ಲ. ನಿಮ್ಮ ದೊಡ್ಡ ಕ್ಯಾಬಿನ್ನ ಮೂಲೆಯಲ್ಲಿ ಬಚ್ಚಿಟ್ಟುಕೊಳ್ಳುವ ಬದಲು, ಒಟ್ಟಾಗಿ ಬಂದು ಈ ರೀತಿಯ ಆರೋಪಗಳಿಗೆ ಉತ್ತರ ಕೊಡಿ. ಅರ್ನಬ್ ಇಷ್ಟೆಲ್ಲಾ ಮಾತಾಡುತ್ತಿರುದು, ನಮ್ಮಲ್ಲಿ ಒಗ್ಗಟಿಲ್ಲ ಮತ್ತು ಈ ಬಗ್ಗೆ ಪ್ರಶ್ನಿಸುವ ನರ ಇಲ್ಲ ಎಂಬ ಕಾರಣಕ್ಕಾಗಿ. ಈಗಲಾದರೂ ಎದ್ದು ಬನ್ನಿ’ ಎಂದು ಅವರು ಕರೆ ನೀಡಿದ್ದರು.
55 ಲಕ್ಷ ರೂ. ವಿತ್ಡ್ರಾಯಲ್ ಬಿಟ್ಟರೆ, ರಿಯಾ ಅಥವಾ ಸಂಬಂಧಿಕರ ಖಾತೆಗೆ ದೊಡ್ಡ ಮೊತ್ತ ವರ್ಗಾವಣೆಗೊಂಡಿಲ್ಲ