ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿ ಎರಡು ತಿಂಗಳ ಮೇಲಾಯಿತು. ಇಂದಿಗೂ ಅವರ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಒಂದಿಲ್ಲೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದೆ. ತನಿಖೆಯ ಹಾದಿ ದಿನದಿಂದ ದಿನಕ್ಕೆ ಕಠಿಣವಾಗುತ್ತಿದ್ದು, ಹೊಸ ಹೊಸ ವಿಚಾರಗಳು ಹೊರ ಬರುತ್ತಿವೆ. ಈ ನಡುವೆ ಸುಶಾಂತ್ ಸಾವಿಗೆ ನ್ಯಾಯದೊರಕಬೇಕೆಂಬ ಉದ್ದೇಶದಿಂದ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಗ್ಲೋಬಲ್ ಪ್ರೇಯರ್ ಸಹ ಆಯೋಜಿಸಿದ್ದರು. ಇದೀಗ ಇನ್ನೊಂದು ಬದಿಯಲ್ಲಿ ಸುಶಾಂತ್ಗೆ ರಾಷ್ಟ್ರ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ.
ಇದನ್ನೂ ಓದಿ: ಜನರೇಷನ್ ಗ್ಯಾಪ್ನಲ್ಲಿ ಚೌಕಾಬಾರ! ಚಿತ್ರೀಕರಣಕ್ಕೆ ಮತ್ತೆ ಚಾಲನೆ
ಹೌದು, ಈಗಾಗಲೇ ಸಿನಿಮಾ ವಲಯದಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಈ ಸಂಬಂಧ ಚರ್ಚೆಗಳು ನಡೆಯುತ್ತಿದ್ದು, ಸುಶಾಂತ್ ಸಾಧನೆ ಪರಿಗಣಿಸಿ ಮರಣೋತ್ತರ ರಾಷ್ಟ್ರ ಪ್ರಶಸ್ತಿಯನ್ನು ನೀಡುವ ಅಭಿಪ್ರಾಯ ವ್ಯಕ್ತವಾಗಿದೆ. ‘ಸುಶಾಂತ್ ಸಾವಿನ ಬಳಿಕ ಇಡೀ ಸಿನಿಮಾರಂಗವೇ ಅಲುಗಾಡಿದೆ. ಇಡೀ ಬಾಲಿವುಡ್ ಕಂಬನಿ ಮಿಡಿದಿದೆ. ಅವರ ಸಾವಿನ ಬಳಿಕ ಸುಶಾಂತ್ ಅವರನ್ನು ಗುರುತಿಸಲಾಗುತ್ತಿದೆ. ಇದೆಲ್ಲವನ್ನು ಗಮನಿಸಿ ವಿಶೇಷ ರಾಷ್ಟ್ರ ಪ್ರಶಸ್ತಿಯನ್ನು ನೀಡಲಾಗುವುದು’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿರ್ಧರಿಸಿದೆ ಎಂಬುದು ಮೂಲಗಳ ಮಾಹಿತಿ.
ಇದನ್ನೂ ಓದಿ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ; ವೈದ್ಯರಿಂದ ಭರವಸೆ
ಸಿನಿಮೋತ್ಸವದಲ್ಲಿ ಸುಶಾಂತ್ ಅವರ ಸಿನಿಮಾಯಾನದ ಎಲ್ಲ ಸಿನಿಮಾಗಳ ಪ್ರದರ್ಶನವನ್ನೂ ಆಯೋಜಿಸಲು ಸರ್ಕಾರ ನಿರ್ಧರಿಸಿದೆಯಂತೆ. ಜತೆಗೆ ಭಾರತೀಯ ಸಿನಿಮಾಕ್ಕೆ ಸುಶಾಂತ್ ಕೊಡುಗೆಯನ್ನು ಪರಿಗಣಿಸಿ ವಿಶೇಷವಾದ ಮರೋಣೋತ್ತರ ರಾಷ್ಟ್ರ ಪ್ರಶಸ್ತಿ ನೀಡಲಾಗುತ್ತದೆಯಂತೆ. (ಏಜೆನ್ಸೀಸ್)