More

    ರಿಯಾಳಿಂದ ಸುಶಾಂತ್​ ಮೇಲೆ ಮಾಟ-ಮಂತ್ರ ಪ್ರಯೋಗ!?; ಸ್ನೇಹಿತೆ ಬಿಚ್ಚಿಟ್ಟ ಕಠೋರ ಸತ್ಯವಿದು!

    ಸುಶಾಂತ್​ ಸಾವಿನ ತನಿಖೆ ಬಗೆಬಗೆ ಕೋನಗಳಲ್ಲಿ ವಿಚಾರಣೆಗೊಳಪಡುತ್ತಿದ್ದಂತೆ ಈ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗುತ್ತಿದೆ. ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಸುಶಾಂತ್​ ಸಿಂಗ್​ ತಂದೆ ಕೆಕೆ ಸಿಂಗ್​, ರಿಯಾ ವಿರುದ್ಧ ದೂರು ನೀಡುತ್ತಿದ್ದಂತೆ, ಸಾಕಷ್ಟು ಬೆಳವಣಿಗೆಗಳು ನಡೆದವು. ತನಿಖೆಯ ಮಗ್ಗಲು ಬದಲಾಯಿತು. ವಿಚಾರಣೆಗೆ ಹೊಸಬರ ಆಗಮನವೂ ಆಗುತ್ತಿದೆ. ಇದೀಗ ಈ ಸಾವಿನ ಹಿಂದೆ ಮಾಟ ಮಂತ್ರದ ಜಾಲವೂ ಇದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ!

    ಇದನ್ನೂ ಓದಿ: ಆತನನ್ನು ಆ ಸ್ಥಿತಿಯಲ್ಲಿ ನೋಡಲು ನನಗೆ ಇಷ್ಟವಿರಲಿಲ್ಲ…

    ಸುಶಾಂತ್​ ಸಿಂಗ್​ ಆಪ್ತ ಸ್ನೇಹಿತೆ ಕ್ರಿಸನ್​ ಬರೆಟ್ಟೋ ಇಂಥದ್ದೊಂದು ಮಾತನ್ನು ಹೇಳಿ, ಪ್ರಕರಣದ ಬಗೆಗಿನ ಕುತೂಹಲ ಹೆಚ್ಚಿಸಿದ್ದಾರೆ. ‘ರಿಯಾ ಮತ್ತು ಸುಶಾಂತ್​ ನಡುವಿನ ನಂಟು ಯಾವಾಗ ಹೆಚ್ಚಾಗುತ್ತ ಹೋಯಿತೋ ಆಗಿನಿಂದ ಸ್ನೇಹಿತರು ಸೇರಿ ಮನೆಯವರನ್ನೇ ಸುಶಾಂತ್​ ದೂರವಿಟ್ಟರು. ಅದಕ್ಕೆಲ್ಲ ರಿಯಾ ಕಾರಣ. ಆಕೆಯೇ ಬ್ಲಾಕ್​ ಮ್ಯಾಜಿಕ್​ ಮೂಲಕ ಇದೆಲ್ಲವನ್ನೂ ಮಾಡಿದ್ದಾಳೆ’ ಎಂದು ಕ್ರಿಸನ್​ ಆರೋಪಿಸಿದ್ದಾರೆ.

    ರಿಯಾಳಿಂದ ಸುಶಾಂತ್​ ಮೇಲೆ ಮಾಟ-ಮಂತ್ರ ಪ್ರಯೋಗ!?; ಸ್ನೇಹಿತೆ ಬಿಚ್ಚಿಟ್ಟ ಕಠೋರ ಸತ್ಯವಿದು!

    ಈ ಮೊದಲು ಸಿಂಗ್​ ಸಾವಿನ ತನಿಖೆಗೆ ಹಾಜರಾಗಿದ್ದ ಸುಶಾಂತ್​ ಮನೆಕೆಲಸದ ವ್ಯಕ್ತಿ ಸಹ, ಸುಶಾಂತ್​ ಮೇಲೆ ರಿಯಾ ಬ್ಲಾಕ್​ ಮ್ಯಾಜಿಕ್​ ಮಾಡಿಸಿದ್ದಾರೆ. ಕುಟುಂಬದಿಂದ ದೂರ ಮಾಡಲು ಈ ರೀತಿ ಮಾಡಿದ್ದರು ಎಂಬ ಹೇಳಿಕೆ ನೀಡಿದ್ದ. ಇದೀಗ ಅದೇ ಮಾತನ್ನು ಸುಶಾಂತ್​ ಆಪ್ತ ಸ್ನೇಹಿತೆ ಕ್ರಿಸನ್​ ಸಹ ಹೇಳುತ್ತಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ತಂದೆ ಒಪ್ಪಿದರೆ, ಪ್ರಕರಣ ಈಗಲೇ ಸಿಬಿಐಗೆ; ಬಿಹಾರ ಸಿಎಂ ನಿತೀಶ್​ ಕುಮಾರ್

    ‘ಯಾವಾಗ ರಿಯಾ ಜತೆ ಡೇಟಿಂಗ್​ ಮಾಡಲು ಶುರುಮಾಡಿದನೋ, ಆವತ್ತಿನಿಂದ ನಮ್ಮ ಇಡೀ ಸಂಗವನ್ನೇ ಕೈಬಿಟ್ಟ. ಮನೆಯವರನ್ನೂ ಸಂಪರ್ಕಿಸಲಿಲ್ಲ. ಆತನ ಫೋನ್​ ನಂಬರ್ ಸಹ ಬದಲಾಯಿತು. ಸುಮಾರು ಸಲ ಸಂಪರ್ಕಿಸಲು ಪ್ರಯತ್ನ ಪಟ್ಟರೂ, ಮಾತಿಗೆ ಸಿಗಲಿಲ್ಲ. ಇದೆಲ್ಲದಕ್ಕೆ ರಿಯಾ ಮಾಟ ಮಂತ್ರದ ಮೊರೆ ಹೋಗಿ ಆತನನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಳು’ ಎಂದಿದ್ದಾರೆ. (ಏಜೆನ್ಸಿಸ್​)

    VIDEO: ಕಪಿಲ್​ ಶರ್ಮಾ ಕಾಮಿಡಿ ಶೋದಲ್ಲಿ ಸೋನು ಸೂದ್​​ ಕಣ್ಣೀರು!; ಭಾವುಕ ಕ್ಷಣಗಳ ವಿಡಿಯೋ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts