ಸುಶಾಂತ್ ಸಿಂಗ್ ರಜಪೂತ್ ಬರೀ ಒಬ್ಬ ಸಿನಿಮಾ ನಟನಷ್ಟೇ ಅಲ್ಲ, ಬೇರೆಬೇರೆ ಕ್ಷೇತ್ರಗಳಲ್ಲೂ ಆಸಕ್ತಿ ಇಟ್ಟುಕೊಂಡಿದ್ದು ಗೊತ್ತೇ ಇದೆ. ಅಷ್ಟೇ ಅಲ್ಲ, ಭವಿಷದಲ್ಲಿ ಅದು ಮಾಡಬೇಕು, ಇದು ಸಾಧಿಸಬೇಕು ಎಂದು ಕನಸು ಕಟ್ಟಿಕೊಂಡಿದ್ದರ ಬಗ್ಗೆ ಸಹ ಸಾಕಷ್ಟು ಚರ್ಚೆಯಾಗಿದೆ.
ಈ ಮಧ್ಯೆ, ಸುಶಾಂತ್ ಕುರಿತು ಇನ್ನೊಂದು ಸುದ್ದಿ ಬಂದಿದೆ. ಅದೇನೆಂದರೆ, ಅವರು ತಮ್ಮ ಕನಸುಗಳನ್ನು ನನಸಿಕೊಳ್ಳುವುದಕ್ಕೆಂದೇ ಒಂದು ವಿಶೇಷ ತಂಡ ಕಟ್ಟಿಕೊಂಡಿದ್ದರಂತೆ. ಹಾಗಂತ ಅವರ ಸ್ನೇಹಿತ ಮತ್ತು ಆ ತಂಡದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಸ್ಯಾಮ್ಯುಯಲ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮತ್ತೆ ವೀರಪ್ಪನ್ ಆದ ಕಿಶೋರ್ … ವೆಬ್ಸೀರೀಸ್ಗೆ ಚಾಲನೆ
ವಿಷಯ ಏನೆಂದರೆ, ಸುಶಾಂತ್ಗೆ ಏನೇನೋ ಸಾಧಿಸಬೇಕು ಎಂಬ ಆಸೆ ಇತ್ತು. ಅದಕ್ಕೆ ಹಲವರು ಸಹಾಯದ ಅವಶ್ಯಕತೆ ಇತ್ತು. ತಮ್ಮ ಹಣಕಾಸಿನ ವ್ಯವಹಾರ ನೋಡಿಕೊಳ್ಳುವವರು, ಲಾ ಗೊತ್ತಿರುವವರು, ವಿಜ್ನಾನ-ತಂತ್ರಜ್ನಾನದ ಬಗ್ಗೆ ಅರಿವಿರುವವರು … ಹೀಗೆ ಹಲವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡಿದ್ದರಂತೆ. ಅವರೆಲ್ಲರ ಸಹಾಯ ಪಡೆದು, ಏನೋ ಸಾಧನೆ ಮಾಡಬೇಕೆಂದು ಹೊರಟಿದ್ದರಂತೆ.
ಈ ಕುರಿತು ಸ್ವತಃ ಸ್ಯಾಮ್ಯುಯಲ್ ಹೇಳಿಕೊಂಡಿದ್ದಾರೆ. ಅವರಿಗೆ ನ್ಯಾಯಾಂಗದ ಬಗ್ಗೆ ಒಂದಿಷ್ಟು ಜ್ನಾನ ಇದ್ದಿದ್ದರಿಂದ, ಸುಶಾಂತ್ ತಮ್ಮ ಜತೆಗೆ ಇಟ್ಟುಕೊಂಡಿದ್ದಾರೆ. ಸುಮಾರು ಒಂದು ವರ್ಷ ಕಾಲ ಸುಶಾಂತ್ ಜತೆಗೆ ಅವರ ಮನೆಯಲ್ಲೇ ಇದ್ದ ಸ್ಯಾಮ್ಯುಯಲ್, ಜುಲೈ 2019ಕ್ಕೆ ದೆಹಲಿಯಲ್ಲಿ ಕೆಲಸ ಸಿಕ್ಕಿತು ಎಂಬ ಕಾರಣಕ್ಕೆ ಬಿಟ್ಟು ಹೋದರಂತೆ.
ಇದನ್ನೂ ಓದಿ: ಸುಶಾಂತ್ ಕೊಂದಿದ್ದು ಯಾರು ಗೊತ್ತಾ? ಚೇತನ್ ಭಗತ್ ಹೇಳ್ತಾರೆ ಕೇಳಿ …
ಆರಂಭದಲ್ಲಿ ಸುಶಾಂತ್ ಅವರ ಕಾಂಟ್ರಾಕ್ಟ್ಗಳು, ಮನೆಯ ಅಗ್ರೀಮೆಂಟ್ಗಳು, ನಿರ್ಮಾಪಕರು ಮತ್ತು ಬ್ರಾಂಡ್ಗಳ ಜತೆ ಮಾತುಕತೆ ಮುಂತಾದ ವಿಷಯಗಳನ್ನು ಸ್ಯಾಮ್ಯುಯಲ್ ನೋಡಿಕೊಳ್ಳುತ್ತಿದ್ದರಂತೆ.
ಸ್ಯಾಮ್ಯುಯಲ್ ಅಲ್ಲದೆ ಕುಶಾಲ್ ಜವೇರಿ, ಸಿದ್ಧಾರ್ಥ್ ಗುಪ್ತಾ, ಅಬ್ಬಾಸ್ ಮುಂತಾದವರು ಈ ತಂಡದಲ್ಲಿದ್ದು, ಒಬ್ಬೊಬ್ಬರು ಒಂದೊಂದು ಕೆಲಸ ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗದೆ.