ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದು ಕೊಲೆ. ಈ ಕುರಿತು ಸಮರ್ಪಕ ತನಿಖೆಯಾಗಬೇಕು ಎಂದು ಮೃತ ಸುಶಾಂತ್ ಅವರ ಸಹೋದರ ಮಾವ ಆರ್.ಸಿ. ಸಿಂಗ್ ಹೇಳಿದ್ದಾರೆ.
ಸುಶಾಂತ್ ಸಿಂಗ್ ರಾಜಪೂತ್ ಅವರ ಅಂತ್ಯಕ್ರಿಯೆ ನೆರವೇರಿಸಲು ಬಿಹಾರದ ಪಟನಾದಿಂದ ಹೊರಡುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅವನು ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವದವನಲ್ಲ. ಆತನನ್ನು ಯಾರೋ ಕೊಲೆ ಮಾಡಿ, ನೇಣಿನ ಕುಣಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಉಸಿರುಗಟ್ಟಿ ಸಾವು: ಮುಂಬೈನಲ್ಲಿ ಸುಶಾಂತ್ ಅವರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಬಂದಿದ್ದು, ಉಸಿರುಗಟ್ಟಿದ್ದರಿಂದಲೇ ಸುಶಾಂತ್ ಅವರ ಮರಣ ಸಂಭವಿಸಿದೆ. ಬಹುಶಃ ನೇಣಿನ ಕುಣಿಕೆ ಬಲಗೊಂಡಿದ್ದರಿಂದ ಅವರು ಉಸಿರುಗಟ್ಟಿರಬಹುದು ಎಂದು ವೈದ್ಯರು ಹೇಳಿದ್ದಾರೆ.
ಮಯಾನ್ ಕ್ಯಾಲೆಂಡರ್ ಪ್ರಕಾರ ಜೂನ್ 21ಕ್ಕೆ ಪ್ರಪಂಚವೇ ಕೊನೆಯಾಗುತ್ತಾ?