More

    ಜ್ಞಾನವಾಪಿಯ ಶಿವಲಿಂಗದ ರಕ್ಷಣೆ ಮುಂದುವರೆಸಿ ಎಂದು ಸುಪ್ರೀಂ ಆದೇಶ

    ನವದೆಹಲಿ: ಇತ್ತೀಚೆಗಷ್ಟೆ ವಾರಾಣಸಿಯ ಜ್ಞಾನವಾಪಿ ಮಸೀದಿ ಇಡೀ ದೇಶದಲ್ಲೇ ತಲ್ಲಣ ಸೃಷ್ಟಿಸಿತ್ತು. ಅಲ್ಲಿ ಪುರಾತತ್ವ ಇಲಾಖೆಗೆ ಸಿಕ್ಕಿದ್ದು ಶಿವಲಿಂಗವೋ ಅಲ್ಲವೋ ಎಂಬ ಪ್ರಶ್ನೆ ವಿವಾದವನ್ನೇ ಹುಟ್ಟು ಹಾಕಿತ್ತು. ಇದೇ ಜ್ಞಾನವಾಪಿ ಪ್ರಕರಣದಿಂದಾಗಿ ನೂಪುರ್​ ಶರ್ಮಾ ಜಗತ್ತಿನಾದ್ಯಂತ ಮುಸಲ್ಮಾನರ ವಿರೋಧ ಕಟ್ಟಿಕೊಂಡದ್ದು.

    ಈಗ ಸುಪ್ರೀಂ ಕೋರ್ಟ್​, ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದಲ್ಲಿ ಸಿಕ್ಕ ಶಿವಲಿಂಗದ ರಕ್ಷಣೆ ಆದೇಶವನ್ನು ಮುಂದುವರೆಸಿದೆ. ಈ ಆದೇಶ ಮುಂದಿನ ಆದೇಶ ಬರುವವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ಸಿಜೆಐ ಚಂದ್ರಚೂಡ, ಜಸ್ಟೀಸ್​ ಸೂರ್ಯ ಕಾಂತ, ಜಸ್ಟೀಸ್​ ಪಿಎಸ್ ನರಸಿಂಹ ಇದ್ದ ತ್ರಿಸದಸ್ಯ ಪೀಠ ಹೇಳಿದೆ. ಜೊತೆಗೆ, ಅಂಜುಮಾನ್​ ಇಂತೆಝಾಮಿಯಾ ಮಸೀದಿ, ಅಲ್ಲಾಹಾಬಾದ್​ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ​ಗೆ ತಮ್ಮ ಉತ್ತರವನ್ನು ಮೂರು ವಾರಗಳ ಒಳಗಾಗಿ ಸಲ್ಲಿಸುವಂತೆ ಹಿಂದು ಪರ ಪಕ್ಷದವರಿಗೆ ನಿರ್ದೇಶಿಸಿದೆ.

    ಮೇ 17 ರಂದು ಸರ್ವೋಚ್ಚ ನ್ಯಾಯಾಲಯ ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಶಿವಲಿಂಗ ಕಂಡುಬಂದ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಮಧ್ಯಂತರ ಆದೇಶವನ್ನು ನೀಡಿತ್ತು.

    ಮೇ 20 ರಂದು ಸುಪ್ರೀಂ ಕೋರ್ಟ್​ ಪ್ರಕರಣದ ಸಂಕೀರ್ಣತೆ ಮತ್ತು ಸೂಕ್ಷ್ಮತೆಯನ್ನು ಗಮನದಲ್ಲಿ ಇಟ್ಟುಕೊಂಡು ಹಿಂದೂ ಭಕ್ತರು ಸಲ್ಲಿಸಿದ ಸಿವಿಲ್ ಮೊಕದ್ದಮೆಯನ್ನು ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಿಂದ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿತ್ತು. 25-30 ವರ್ಷಕ್ಕಿಂತ ಹೆಚ್ಚು ಅನುಭವವಿರುವ ಹಿರಿಯ ನ್ಯಾಯಾಧೀಶರು ಈ ಪ್ರಕರಣವನ್ನು ನಿಭಾಯಿಸ ಬೇಕು ಎಂದು ಹೇಳಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts