More

    ಕನ್ನಡ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ಮುಹೂರ್ತ; ಶುರುವಾಯಿತು ‘ರೆಡ್​ ರಮ್​’

    ಲಕ್ನೋ: ಕನ್ನಡ ಚಿತ್ರಗಳ ಮುಹೂರ್ತ ಕರ್ನಾಟಕದಿಂದ ಹೊರ ನಡೆಯುತ್ತಿರುವುದು ವಿಶೇಷವಲ್ಲ. ರಮೇಶ್​ ಅರವಿಂದ್​ ಅಭಿನಯದ ‘ಅಮೆರಿಕಾ ಅಮೆರಿಕಾ’ ಚಿತ್ರದ ಮುಹೂರ್ತ ಅಮೆರಿಕಾದಲ್ಲಾಗಿತ್ತು. ಶಿವರಾಜಕುಮಾರ್​ ಅಭಿನಯದ ‘ಯುವರಾಜ’ ಚಿತ್ರವು ಲಂಡನ್​ನಲ್ಲಿ ನಡೆದಿತ್ತು. ಈಗ ಕನ್ನಡ ಚಿತ್ರವೊಂದರ ಮುಹೂರ್ತ ಉತ್ತರ ಪ್ರದೇಶದಲ್ಲಾಗಿರುವುದು ವಿಶೇಷ.

    ಇದನ್ನೂ ಓದಿ: ಚಿತ್ರ ವಿಮರ್ಶೆ: ದುಷ್ಟರ ವಿರುದ್ಧ ‘ರಾಣ’ನ ಹೋರಾಟ

    ಕನ್ನಡ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ಮುಹೂರ್ತ; ಶುರುವಾಯಿತು 'ರೆಡ್​ ರಮ್​'ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ರೆಡ್​ ರಮ್​’ ಚಿತ್ರದ ಮುಹೂರ್ತವು ಉತ್ತರ ಪ್ರದೇಶದ, ಮೋದಿನಗರದ ಶ್ರೀ ಸನಾತನ ಧರ್ಮ ದೇವಸ್ಥಾನದಲ್ಲಿ ನೆರವೇರಿತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮೋದಿ ನಗರದ ಶಾಸಕರಾದ ಶ್ರೀಮತಿ ಮಂಜು ಶಿವಾಚ್, ಸ್ಥಳೀಯ ಕೌನ್ಸಿಲರ್ ರಾಜಕುಮಾರಿ ಮುನ್ನಿ ಜಿ ಹಾಗೂ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು.

    ಕ್ರೈಮ್ ಥ್ರಿಲ್ಲರ್ ಕಥೆ ಇರುವ ಈ ಚಿತ್ರವನ್ನು ಪ್ರಮೋದ್ ಜೋಯಿಸ್ ನಿರ್ದೇಶನ ಮಾಡುತ್ತಿದ್ದಾರೆ. ಹಿಂದೆಂದೂ ಕೇಳಿರದಂತಹ ಕಥೆಯ ಅನಾವರಣ ಈ ಚಿತ್ರದಲ್ಲಿದೆ ಎನ್ನುತ್ತಾರೆ ಪ್ರಮೋದ್​. ಆದರೆ, ಚಿತ್ರದ ಕಥೆಯನ್ನು ಅವರು ಬಹಿರಂಗಗೊಳಿಸುವುದಿಲ್ಲ. ಕೊಡಗಿನ ಬೆಡಗಿ ಮಧುರಾ ಹಾಗೂ ಮುಂಬೈನ ಪ್ರಾಚಿ ಶರ್ಮ ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪರಿಚಯವಾಗುತ್ತಿದ್ದಾರೆ.

    ಉತ್ತರ ಪ್ರದೇಶದಲ್ಲಿ ಚಿತ್ರ ಪ್ರಾರಂಭವಾಗಿರುವುದಷ್ಟೇ ಅಲ್ಲ, ಸುಮಾರು 20 ದಿನಗಳ ಕಾಲ ಉತ್ತರಪ್ರದೇಶದ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಉಳಿದ ಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

    ಇದನ್ನೂ ಓದಿ: ಚಿತ್ರ ವಿಮರ್ಶೆ: ‘ದಿಲ್​ ಪಸಂದ್​’ನಲ್ಲಿ ಸ್ವಲ್ಪ ನಗುವಿದೆ, ಸ್ವಲ್ಪ ಅಳುವಿದೆ

    ಸ್ಯಾಂಡಲ್​ವುಡ್​ ಮತ್ತು ಬಾಲಿವುಡ್​ ಕಲಾವಿದರ ಸಮಾಗಮ ಇರುವ ಈ ಚಿತ್ರದಲ್ಲಿ ರಾಜ್​ವೀರ್, ಮಧುರಾ, ಅಫ್ಜಲ್ , ಶ್ರೀದತ್ತಾ, ಪ್ರಾಚಿ ಶರ್ಮ, ಧ್ರಿತೇಶ್ ವಿನಯ್ ಸೂರ್ಯ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಚೇತನ್​ ಕೃಷ್ಣ ಸಂಗೀತ ಸಂಯೋಜಿಸುತ್ತಿದ್ದು, ಶಿವಶಂಕರ್​ ಛಾಯಾಗ್ರಹಣ ಮಾಡಲಿದ್ದಾರೆ. ಅಶೋಕ್ ದೇವನಾಂಪ್ರಿಯ, ಕಿಶೋರ್ ಎ, ವಿಜಯ್ ಕುಮಾರ್ ಹಾಗೂ ಹನಿ ಚೌಧರಿ ಈ ಚಿತ್ರವನ್ನು ಜತೆಯಾಗಿ ನಿರ್ಮಿಸುತ್ತಿದ್ದಾರೆ.

    ಅವಳಿ ಮಕ್ಕಳಿಗೆ ಹೆಸರಿಟ್ಟ ಅಮೂಲ್ಯ-ಜಗದೀಶ್​; ಹೆಸರೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts