ಚೆನ್ನೈ: ಟೂರ್ನಿಯ ಚೊಚ್ಚಲ ಚಾಂಪಿಯನ್ಸ್ ರಾಜಸ್ಥಾನ ರಾಯಲ್ಸ್ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿದ್ದು, ಐಪಿಎಲ್-17ರಲ್ಲಿ ಶುಕ್ರವಾರ ನಡೆಯಲಿರುವ “ಸೆಮಿೈನಲ್’ ಮಾದರಿಯ ಎರಡನೇ ಕ್ವಾಲಿೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಎದುರು ಪ್ರಶಸ್ತಿ ಸುತ್ತಿಗೇರಲು ಸೆಣಸಲಿದೆ.
ಸ್ಪಿನ್ನರ್ಗಳೆ ಪ್ರಮುಖ ಅಸ್ತ್ರ: ಟೂರ್ನಿಯ ಮೊದಲ 9 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, ಕೇವಲ 1ರಲ್ಲಿ ಸೋತಿದ್ದ ರಾಜಸ್ಥಾನ ತಂಡ,
ನಂತರ ಸತತ 4 ಪಂದ್ಯಗಳಲ್ಲಿ ಸೋತಿತ್ತು. ಎಲಿಮಿನೇಟರ್ನಲ್ಲಿ ಹಳಿಗೆ ಮರಳುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಜತೆಗೆ ಆರ್. ಅಶ್ವಿನ್ ಟೂರ್ನಿಯ ಮಹತ್ವದ ಟ್ಟದಲ್ಲಿ ಲಯಕ್ಕೆ ಮರಳಿರುವುದು ಪ್ಲಸ್ ಪಾಯಿಂಟ್. ರಾಜಸ್ಥಾನ ತಂಡ ಟೂರ್ನಿಯಲ್ಲಿ ಸಮರ್ಥ ಬೌಲಿಂಗ್ ಕಾಂಬಿನೇಷನ್ ಹೊಂದಿದ್ದು, ಸನ್ರೈಸರ್ಸ್ ಬ್ಯಾಟರ್ಗಳಿಗೆ ಸವಾಲೊಡ್ಡಬಹುದು. ಜೋಸ್ ಬಟ್ಲರ್ ಸ್ಥಾನ ತುಂಬಬಲ್ಲ ಆಟಗಾರರ ಕೊರೆತೆ ರಾಜಸ್ಥಾನಕ್ಕಿದೆ. ಜತೆಗೆ ಯಶಸ್ವಿ ಜೈಸ್ವಾಲ್ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾಗಿದ್ದು ಫಾಮ್ರ್ಗೆ ಮರಳಬೇಕಿದೆ.
ನಾಯಕ ಸಂಜು ಸ್ಯಾಮ್ಸನ್ (521) , ರಿಯಾನ್ ಪರಾಗ್ ತಂಡದ ಪ್ರಮುಖ ಆಧಾರ ಸ್ತಂಭ ಎನಿಸಿದ್ದಾರೆ. ಆದರೆ ಹಿಂದಿನ 3 ಪಂದ್ಯಗಳಲ್ಲಿ ಸ್ಯಾಮ್ಸನ್ 20ರ ಗಡಿ ದಾಟಿಲ್ಲ. ಹಿಂದಿನ ಪಂದ್ಯದಲ್ಲಿ ಶಿಮ್ರೊನ್ ಹೆಟ್ಮೆಯರ್, ರೋವ್ಮನ್ ಪೊವೆಲ್ ಆಟ ಆತ್ಮವಿಶ್ವಾಸ ವೃದ್ಧಿಸಿದೆ. ಯಜುವೇಂದ್ರ ಚಾಹಲ್ ಹಾಗೂ ಆರ್. ಅಶ್ವಿನ್ ನಂಬಿಕೆ ಉಳಿಸಿಕೊಂಡಿದ್ದಾರೆ. ಆರ್ಸಿಬಿಗೆ ಕಡಿವಾಣ ಹೇರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅಶ್ವಿನ್ಗೆ ತವರಿನಲ್ಲಿ ಪ್ರಶಸ್ತಿ ಜಯಿಸುವ ಕನಸು ನನಸಾಗಿಸಿಕೊಳ್ಳುವ ಅವಕಾಶವಿದೆ. ಅಶ್ವಿನ್ ತವರಿನ ಅಂಗಳದಲ್ಲಿ ಮ್ಯಾಜಿಕ್ ಮಾಡುವ ನಿರೀೆ ರಾಜಸ್ಥಾನ ತಂಡಕ್ಕಿದೆ.
ಬಿಗ್ ಹಿಟ್ಟರ್ಗಳ ಬಲ: ಟೂರ್ನಿಯಲ್ಲಿ ತಂಡವೊಂದರ ಗರಿಷ್ಠ ರನ್ ಕಲೆಹಾಕಿರುವ ಸನ್ರೈಸರ್ಸ್ಗೆ “ಟ್ರಾವಿಷೇಕ್’ ಪ್ರಮುಖ ಆಧಾರ. ಟ್ರಾವಿಸ್ ಹೆಡ್ (533), ಅಭಿಷೇಕ್ ಶರ್ಮ (470) ಹಾಗೂ ಹೆನ್ರಿಕ್ ಕ್ಲಾಸೆನ್ (413) ಅವರಂತಹ ಸ್ಫೋಟಕ ಬ್ಯಾಟರ್ಗಳ ಬಲವಿದೆ. ಆದರೆ ಸತತ 2 ಪಂದ್ಯಗಳಲ್ಲಿ ಟ್ರಾವಿಸ್ ಹೆಡ್ ಖಾತೆ ತೆರೆಯುವಲ್ಲಿ ವಿಲರಾಗಿದ್ದಾರೆ. ಅಭಿಷೇಕ್ ಶರ್ಮ ಉಪಯುಕ್ತ ಕೊಡುಗೆ ನೀಡಿದ್ದಾರೆ. ಕ್ವಾಲಿೈಯರ್ನಲ್ಲಿ ರಾಹುಲ್ ತ್ರಿಪಾಠಿ ಅರ್ಧಶತಕದಾಟ ತಂಡದ ಬಲ ಹೆಚ್ಚಿಸಿದೆ.
ಆಲ್ರೌಂಡರ್ ನಿತೀಶ್ ಕುಮಾರೆ ರೆಡ್ಡಿ, ಅಬ್ದುಲ್ ಸಮದ್, ಶಾಬಾಜ್ ಅಹ್ಮದ್ ಅಗತ್ಯ ಕೊಡುಗೆ ನೀಡುತ್ತ ಬಂದಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಟಿ. ನಟರಾಜನ್ (18) ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದು, ಸನ್ರೈಸರ್ಸ್ನ ಗರಿಷ್ಠ ವಿಕೆಟ್ ಟೇಕರ್ ಎನಿಸಿದ್ದಾರೆ. ಚೆಪಾಕ್ ಅಂಗಣ ಇವರಿಗೆ ತವರಿನ ಅಂಗಣವಾಗಿದ್ದು, ದೇಶೀಯ ಟೂರ್ನಿ ಆಡಿರುವ ಅನುಭವ ಹೊಂದಿದ್ದಾರೆ. ನಾಯಕ ಪ್ಯಾಟ್ ಕಮ್ಮಿನ್ಸ್ (16) ನಿಂದ ಪರಿಣಾಮಕಾರಿ ಪ್ರದರ್ಶನ ಮೂಡಿಬಂದಿಲ್ಲ. ಭುವನೇಶ್ವರ್ ಕುಮಾರ್ (11) ಸಮರ್ಥ ಬೆಂಬಲ ನೀಡಬೇಕಿದೆ. ಆದರೆ ಅನುಭವಿ ಸ್ಪಿನ್ನರ್ಗಳ ಕೊರತೆಯಿಂದಾಗಿ ರಾಜಸ್ಥಾನ ಎದುರು ಹಿನ್ನಡೆ ಎದುರಿಸುವ ಸಾಧ್ಯತೆಗಳಿವೆ.