ರಾಣೆಬೆನ್ನೂರ: ಪ್ರಧಾನಮಂತ್ರಿಗಳ ಕ್ಷಯಮುಕ್ತ ಭಾರತ ಅಂಗವಾಗಿ ಮಂಗಳವಾರ ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್ನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಗ್ರಾಮದ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು.
ಉಪನ್ಯಾಸಕ ಎಚ್. ಶಿವಾನಂದ, ಡಾ. ಜಗದೀಶ ಪಾಟೀಲ, ಸಿದ್ದಣ್ಣ ಗುಡಣ್ಣನವರ, ಗಂಗಮಾಳಮ್ಮ ಕುಸಗೂರು, ಸುನಂದಾ ಕುಸಗೂರು, ದ್ರಾಕ್ಷಾಯಿಣಿ ಕಮ್ಮಾರ, ಅಕ್ಕಮ್ಮ ಇಮ್ಮಡಿ ಮತ್ತಿತರರು ಪಾಲ್ಗೊಂಡಿದ್ದರು.