More

    ಹುಸಿಯಾದ ನಿರೀಕ್ಷೆ: ಸಂಸದೆ ಸುಮಲತಾಗೆ ಶುರುವಾಯ್ತು ರಾಜಕೀಯ ಭವಿಷ್ಯದ ಭಯ

    ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ. ಖಂಡಿತವಾಗಿ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಅಂತ ಹೇಳಿಕೊಂಡು ಓಡಾಡುತ್ತಿದ್ದ ಸಂಸದೆ ಸುಮಲತಾ ಅಂಬರೀಷ್​ ಅವರಿಗೆ ಚುನಾವಣಾ ಫಲಿತಾಂಶದಿಂದ ಭಾರೀ ಮುಖಭಂಗವಾಗಿದೆ.

    ಮೊದಲ ಟಾಸ್ಕ್​ನಲ್ಲೇ ಫೇಲ್​

    ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ ಬಳಿಕ ಮೊದಲ ಟಾಸ್ಕ್​ನಲ್ಲೇ ಸಂಸದೆ ಸುಮಲತಾ ಫೇಲ್ ಆಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಒಂದೇ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಿಕೊಳ್ಳುವಲ್ಲಿ ಸುಮಲತಾ ಅಂಬರೀಷ್​ ವಿಫಲವಾಗಿದ್ದಾರೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಅಲ್ಲದೆ, ಬಿಜೆಪಿ ಗೆಲ್ಲಿಸುವ ಪಣತೊಟ್ಟಿದ್ದರು. ಆದರೆ, ಹೊರಬಿದ್ದಿರುವ ಫಲಿತಾಂಶ ಸುಮಲತಾಗೆ ಮುಖಭಂಗವಾಗಿದೆ.

    ಇದನ್ನೂ ಓದಿ: ಆಘಾತದಿಂದ ಹೊರ ಬಾರದ ಪರಾಜಿತರು: ಹಂಗಾಮಿ ಸಿಎಂ ಬೊಮ್ಮಾಯಿ ಬಳಿ ಬೇಸರ ನಿವೇದನೆ

    ಸುಮಕ್ಕಗೆ ಬಿಗ್​ ಶಾಕ್

    ಇನ್ನೂ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ರೆಬೆಲ್ ಲೇಡಿಗೆ ರಾಜಕೀಯ ಭವಿಷ್ಯದ ಭಯ ಶುರುವಾಗಿದೆ. ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿದ್ದ ಸುಮಕ್ಕಗೆ ಇದೀಗ ಬಿಗ್​ ಶಾಕ್ ಎದುರಾಗಿದೆ. ಸಕ್ಕರೆ ನಾಡಿನಲ್ಲಿ ಗೆಲುವು ಸಾಧಿಸುವುದಿರಲಿ ಕನಿಷ್ಠ ಪೈಪೋಟಿ ಕೊಡುವುದಕ್ಕೂ ಬಿಜೆಪಿ ವಿಫಲವಾಗಿದ್ದು, ಸುಮಲತಾ ಅವರಿಗೆ ಮುಂದಿನ ರಾಜಕೀಯ ಹಾದಿ ಕಠಿಣ ಎಂಬಂತೆ ಭಾಸವಾಗುತ್ತಿದೆ.

    ಲೋಕಸಭಾ ಚುನಾವಣೆಗೆ ಇನ್ನೊಂದೆ ವರ್ಷ ಬಾಕಿ ಇದೆ. ಈ ಚುನಾವಣೆಯಲ್ಲೂ ಹಿನ್ನೆಡೆ ಅನುಭವಿಸುವ ಭಯ ಸುಮಕ್ಕನಿಗೆ ಕಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್​ಗೆ ಸೆಡ್ಡು ಹೊಡೆಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ಹೀನಾಯ ಸೋಲಿನೊಂದಿಗೆ ರಾಜಕೀಯ ಭವಿಷ್ಯವೇ ಕಮರುವ ಭೀತಿಯಲ್ಲಿ ಸುಮಲತಾ ಇದ್ದಾರೆ. (ದಿಗ್ವಿಜಯ ನ್ಯೂಸ್​)

    ಶಿವಮೊಗ್ಗದಲ್ಲಿ ಹಣಕ್ಕಾಗಿ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು: 20 ಲಕ್ಷ ರೂ.ಗೆ ಬೇಡಿಕೆ

    ಪತ್ನಿಯನ್ನು ಕಾಪಾಡಲು ಬಂದ ಪೊಲೀಸ್​ ಅಧಿಕಾರಿಯ ಮೂಗು ಮುರಿದು ಎಸ್ಕೇಪ್​ ಆದ ಗಂಡ!

    ಸಿದ್ದರಾಮಯ್ಯ, ಡಿಕೆಶಿ ಜತೆಗೆ ಸಿಎಂ ರೇಸ್​ನಲ್ಲಿ ಮತ್ತೊಂದು ಹೆಸರು: 25ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts