ಬೆಂಗಳೂರು: ಸಂಸದೆಯೂ ಆಗಿರುವ ನಟಿ ಸುಮಲತಾ ಅಂಬರೀಷ್ ಇದೀಗ ತಮ್ಮ ಮಗನ ಪರವಾಗಿ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ದಾರಿ ತಪ್ಪಿಸುವುದು ಸರಿಯಲ್ಲ ಎಂಬ ಕಿವಿಮಾತನ್ನು ಕೂಡ ಹೇಳಿದ್ದಾರೆ.
ಸಂಸದೆ ಸುಮಲತಾ ಹೀಗೊಂದು ಮನವಿ ಮಾಡಿಕೊಳ್ಳಲು ಪ್ರಮುಖ ಕಾರಣ ಒಂದು ಟ್ವೀಟ್. ಇಂದು ತೆರೆ ಕಂಡಿರುವ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರ ಸಿನಿಮಾಗೆ ಮೆಚ್ಚುಗೆ ಸೂಚಿಸಿ ಅಭಿಷೇಕ್ ಅಂಬರೀಷ್ ಎಂಬ ಟ್ವಿಟರ್ ಹ್ಯಾಂಡಲ್ನಿಂದ ಒಂದು ಟ್ವೀಟ್ ಆಗಿದ್ದರಿಂದ ಸುಮಲತಾ ಹೀಗೊಂದು ಮನವಿ ಮಾಡಿಕೊಂಡಿದ್ದಾರೆ.
ಇದು ಯಾರ ಟ್ವಿಟರ್ ಹ್ಯಾಂಡಲ್ ಎಂಬುದಾಗಿ ನನಗೆ ಗೊತ್ತಿಲ್ಲ. ಅಭಿಷೇಕ್ ಅಂಬರೀಷ್ ಟ್ವಿಟರ್ನಲ್ಲಿ ಇಲ್ಲ. ಹೀಗಾಗಿ ಈ ಟ್ವಿಟರ್ ಹ್ಯಾಂಡಲ್ ಹೆಸರು ಬದಲಿಸಿಕೊಳ್ಳಿ ಅಥವಾ ಇದು ಫ್ಯಾನ್ ಪೇಜ್ ಆಗಿದ್ದರೆ ಅದನ್ನು ನಮೂದಿಸಿ ಎಂದು ಕೋರಿಕೊಂಡಿರುವ ಸುಮಲತಾ, ದಾರಿ ತಪ್ಪಿಸುವುದು ಸರಿಯಲ್ಲ ಎಂದೂ ಹೇಳಿದ್ದಾರೆ.
Hello , I dont know whose twitter handle this is..Abishek Ambareesh is not on twitter
So requesting you to please change name of your handle..or if its a fan page then mention it as such.
Not right to mislead https://t.co/O69Estggka— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) September 30, 2022
ಭಾರತವನ್ನೇ ತಪ್ಪಾಗಿ ತೋರಿಸಿದ ಶಶಿ ತರೂರ್ ಪ್ರಣಾಳಿಕೆ!; ಜಮ್ಮು-ಕಾಶ್ಮೀರವೇ ಇರದ ನಕಾಶೆ..
ಡಿ.ಕೆ.ಶಿವಕುಮಾರ್ ಡ್ಯಾನ್ಸ್ ಚಿತ್ರೀಕರಣಕ್ಕೆ ಅಡ್ಡಿ, ಡ್ರೋಣ್ ಕ್ಯಾಮೆರಾ ಕಿತ್ತೊಯ್ದ ರಾಹುಲ್ ಭದ್ರತಾ ಸಿಬ್ಬಂದಿ