ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವು ಖಾಯಿಲೆಗಳ ಕುರಿತಾಗಿ ಹಲವು ಸಿನಿಮಾಗಳು ಬಂದಿವೆ. ಆದರೆ, ಡಯಾಬಿಟೀಸ್ ಕುರಿತಾಗಿ ಇದುವರೆಗೂ ಯಾರೂ ಚಿತ್ರ ಮಾಡುವ ಪ್ರಯತ್ನ ಮಾಡಿರಲಿಲ್ಲ. ಈ ಹಿಂದೆ `ಡಾಟರ್ ಆಫ್ ಪಾರ್ವತಮ್ಮ’ ಚಿತ್ರವನ್ನು ನಿರ್ಮಿಸಿದ್ದ ಮತ್ತು ಇದೀಗ ಪ್ರಜ್ವಲ್ ಅಭಿನಯದ `ವೀರಂ’ ಚಿತ್ರವನ್ನು ನಿರ್ಮಿಸುತ್ತಿರುವ ಶಶಿಧರ್, ಕೆಲವು ದಿನಗಳ ಹಿಂದೆ ಡಯಾಬಿಟೀಸ್ ಕುರಿತಾಗಿ ಒಂದು ಚಿತ್ರ ಮಾಡುವುದಾಗಿ ಹೇಳಿದ್ದರು.
ಇದನ್ನೂ ಓದಿ: ಕ್ರೀಡಾಪಟುವಿಗೆ ಮಂಡಿ ಆಪರೇಶನ್ ಮಾಡಿಸ್ತಾರಂತೆ ಸೋನು
ಅದೀಗ ಕಾರ್ಯರೂಪಕ್ಕೆ ತಂದಿದ್ದಾರೆ. ಒಬ್ಬ ಯುವಕನಿಗೆ ಡಯಾಬಿಟೀಸ್ ಬಂದರೆ ಏನಾಗುತ್ತದೆ ಮತ್ತು ಅದು ಅವನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ತಮಾಷೆಯಾಗಿ ತಮ್ಮ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದಾರೆ. ಅಂದಹಾಗೆ, ಈ ಚಿತ್ರದ ಹೆಸರೇನು ಗೊತ್ತಾ? `ಶುಗರ್ಲೆಸ್’.
`ಶುಗರ್ಲೆಸ್’ ಚಿತ್ರವನ್ನು ಶಶಿಧರ್ ನಿರ್ಮಿಸುತ್ತಿರುವುದಷ್ಟೇ ಅಲ್ಲ, ಕಥೆ-ಚಿತ್ರಕಥೆ ಬರೆದು ನಿರ್ದೇಶನವನ್ನೂ ಸಹ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರಕಥೆ ಮಾಡಿಟ್ಟುಕೊಂಡಿರುವ ಅವರು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭಿಸುವುದಕ್ಕೆ ಯೋಚಿಸುತ್ತಿದ್ದಾರೆ.
ಇದನ್ನೂ ಓದಿ: ರಾಮ್ಗೋಪಾಲ್ ವರ್ಮಾಗೆ ಕರೊನಾ ಪಾಸಿಟಿವ್!
ಈ ಕುರಿತು `ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, `ಈಗಾಗಲೇ ಚಿತ್ರಕಥೆ ಕೆಲಸ ಮುಗಿದಿದೆ. ಇನ್ನು ಶೂಟಿಂಗ್ ಪ್ರಾರಂಭವಾಗಬೇಕು. ಸದ್ಯಕ್ಕೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಎನ್ನುವುದು ಸ್ಪಷ್ಟವಾಗಲಿದೆ’ ಎನ್ನುತ್ತಾರೆ.
ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಅರ್ಪಿಸುತ್ತಿದ್ದು, ಚಿತ್ರದ ಬಿಡುಗಡೆ ಮತ್ತು ಪ್ರಚಾರಕ್ಕೆ ಸಹಾಯ ಮಾಡಲಿದ್ದಾರಂತೆ.
ಆ ಪೇಂಟಿಂಗ್ ನೋಡಿದಾಗ ಸುಶಾಂತ್ಗೆ ಏನಾಯ್ತು? ರಿಯಾ ಹೇಳ್ತಾರೆ ಕೇಳಿ