More

    ಇದು ಸತ್ವಪರೀಕ್ಷೆಯ ವರ್ಷ … ಹಾಗಂತ ಸುದೀಪ್​ ಹೇಳಿದ್ದ್ಯಾಕೆ?

    ಇಂದು ವರಮಹಾಲಕ್ಷ್ಮೀ ಹಬ್ಬ. ಕನ್ನಡಿಗರ ಪಾಲಿಗೆ ಬಹಳ ವಿಶೇಷವಾದ ಹಬ್ಬ. ಎಲ್ಲವೂ ಚೆನ್ನಾಗಿದ್ದರೆ ಬಹಳ ಸಂಭ್ರಮದಿಂದ ಈ ಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗುತಿತ್ತು. ಆದರೆ, ಕರೊನಾ ಕಾರ್ಮೋಡವಿರುವುದರಿಂದ ಈ ಬಾರಿ ಅಂತಹ ಸಂಭ್ರಮ ಕಾಣುತ್ತಿಲ್ಲ.

    ಇದನ್ನೂ ಓದಿ: ನಮ್ದೇ ದಾರಿ, ನಮ್ದೇ ಸವಾರಿ … ‘ಯುವರತ್ನ’ ಚಿತ್ರದ ಹೊಸ ಪೋಸ್ಟರ್​ ಬಂತು

    ಸಿನಿಮಾ ಕಲಾವಿದರು, ಹಬ್ಬಗಳ ಸಂದರ್ಭದಲ್ಲಿ ಜನತೆಗೆ ಮತ್ತು ಅಭಿಮಾನಿಗಳಿಗೆ ಶುಭ ಕೋರುವುದು ಸಹಜ. ಈ ಬಾರಿ ಸಹ ಅದು ಮುಂದುವರೆದಿದೆ. ಪ್ರಮುಖವಾಗಿ ನಟ ಸುದೀಪ್​ ಈ ಬಾರಿ ವಿಶೇಷವಾದ ಫೋಟೋವೊಂದರ ಜತೆಗೆ, ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘2020 ಸತ್ವಪರೀಕ್ಷೆಯ ವರ್ಷ. ಸ್ವಲ್ಪ ಖುಷಿ, ಜಾಸ್ತಿ ಕಷ್ಟಗಳನ್ನು ಕಂಡಿದ್ದೇವೆ. ದುಃಖದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದೇವೆ. ಇದೇ ಪ್ರೀತಿ, ನಂಬಿಕೆ ಮತ್ತು ಒಗ್ಗಟ್ಟಿನಿಂದ ಈ ವರ್ಷ ಕಳೆಯಬೇಕು ಮತ್ತು ಉಳಿಯಬೇಕು. ಈ ಶುಭದಿನ ಎಲ್ಲರ ಜೀವನವನ್ನು ಮೊದಲಿನಂತಾಗಿಸಲಿ. ಕನ್ನಡಿಗರೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು’ ಎಂದು ಶುಭ ಹಾರೈಸಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ ನಟನ ಪುತ್ರಿಗೇ ಬ್ಲ್ಯಾಕ್​ಮೇಲ್​ ಮಾಡಲು ಹೋದ, ಪೊಲೀಸರಿಗೆ ಸಿಕ್ಕಿಬಿದ್ದ

    ಬರೀ ಸುದೀಪ್​ ಅಷ್ಟೇ ಅಲ್ಲ, ಎಲ್ಲಾ ಪ್ರಮುಖ ನಟ-ನಟಿಯರು ಸಹ ಸೋಷಿಯಲ್​ ಮೀಡಿಯಾ ಮೂಲಕ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ. ದರ್ಶನ್​, ಸುಮಲತಾ ಅಂಬರೀಷ್​, ಮಾನ್ವಿತಾ ಹರೀಶ್​, ಪ್ರಣೀತಾ ಸುಭಾಷ್​, ನಭಾ ನಟೇಶ್​, ಅನಿತಾ ಭಟ್​, ರಚಿತಾ ರಾಮ್​, ಶಶಾಂಕ್​ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

    VIDEO| ಸುಶಾಂತ್​ ಆತ್ಮಹತ್ಯೆ ಪ್ರಕರಣ: ಬಿಹಾರ ಪೊಲೀಸರಿಗೆ ಸಿಕ್ಕ ವಿಡಿಯೋದಲ್ಲಿದೆ ರಿಯಾ ನಿಗೂಢ ಮಾತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts