ಇಂದು ವರಮಹಾಲಕ್ಷ್ಮೀ ಹಬ್ಬ. ಕನ್ನಡಿಗರ ಪಾಲಿಗೆ ಬಹಳ ವಿಶೇಷವಾದ ಹಬ್ಬ. ಎಲ್ಲವೂ ಚೆನ್ನಾಗಿದ್ದರೆ ಬಹಳ ಸಂಭ್ರಮದಿಂದ ಈ ಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗುತಿತ್ತು. ಆದರೆ, ಕರೊನಾ ಕಾರ್ಮೋಡವಿರುವುದರಿಂದ ಈ ಬಾರಿ ಅಂತಹ ಸಂಭ್ರಮ ಕಾಣುತ್ತಿಲ್ಲ.
ಇದನ್ನೂ ಓದಿ: ನಮ್ದೇ ದಾರಿ, ನಮ್ದೇ ಸವಾರಿ … ‘ಯುವರತ್ನ’ ಚಿತ್ರದ ಹೊಸ ಪೋಸ್ಟರ್ ಬಂತು
ಸಿನಿಮಾ ಕಲಾವಿದರು, ಹಬ್ಬಗಳ ಸಂದರ್ಭದಲ್ಲಿ ಜನತೆಗೆ ಮತ್ತು ಅಭಿಮಾನಿಗಳಿಗೆ ಶುಭ ಕೋರುವುದು ಸಹಜ. ಈ ಬಾರಿ ಸಹ ಅದು ಮುಂದುವರೆದಿದೆ. ಪ್ರಮುಖವಾಗಿ ನಟ ಸುದೀಪ್ ಈ ಬಾರಿ ವಿಶೇಷವಾದ ಫೋಟೋವೊಂದರ ಜತೆಗೆ, ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘2020 ಸತ್ವಪರೀಕ್ಷೆಯ ವರ್ಷ. ಸ್ವಲ್ಪ ಖುಷಿ, ಜಾಸ್ತಿ ಕಷ್ಟಗಳನ್ನು ಕಂಡಿದ್ದೇವೆ. ದುಃಖದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದೇವೆ. ಇದೇ ಪ್ರೀತಿ, ನಂಬಿಕೆ ಮತ್ತು ಒಗ್ಗಟ್ಟಿನಿಂದ ಈ ವರ್ಷ ಕಳೆಯಬೇಕು ಮತ್ತು ಉಳಿಯಬೇಕು. ಈ ಶುಭದಿನ ಎಲ್ಲರ ಜೀವನವನ್ನು ಮೊದಲಿನಂತಾಗಿಸಲಿ. ಕನ್ನಡಿಗರೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು’ ಎಂದು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟನ ಪುತ್ರಿಗೇ ಬ್ಲ್ಯಾಕ್ಮೇಲ್ ಮಾಡಲು ಹೋದ, ಪೊಲೀಸರಿಗೆ ಸಿಕ್ಕಿಬಿದ್ದ
ಬರೀ ಸುದೀಪ್ ಅಷ್ಟೇ ಅಲ್ಲ, ಎಲ್ಲಾ ಪ್ರಮುಖ ನಟ-ನಟಿಯರು ಸಹ ಸೋಷಿಯಲ್ ಮೀಡಿಯಾ ಮೂಲಕ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ. ದರ್ಶನ್, ಸುಮಲತಾ ಅಂಬರೀಷ್, ಮಾನ್ವಿತಾ ಹರೀಶ್, ಪ್ರಣೀತಾ ಸುಭಾಷ್, ನಭಾ ನಟೇಶ್, ಅನಿತಾ ಭಟ್, ರಚಿತಾ ರಾಮ್, ಶಶಾಂಕ್ ಸೇರಿದಂತೆ ಹಲವರು ಶುಭ ಕೋರಿದ್ದಾರೆ.
2020 ಸತ್ವಪರೀಕ್ಷೆಯ ವರ್ಷ!
ಸ್ವಲ್ಪ ಖುಷಿ, ಜಾಸ್ತಿ ಕಷ್ಟಗಳನ್ನು ಕಂಡಿದ್ದೇವೆ. ದುಃಖದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದೇವೆ. ಇದೇ ಪ್ರೀತಿ, ನಂಬಿಕೆ ಮತ್ತು ಒಗ್ಗಟ್ಟಿನಿಂದ ಈ ವರ್ಷ ಕಳೆಯಬೇಕು ಮತ್ತು ಉಳಿಯಬೇಕು. ಈ ಶುಭದಿನ ಎಲ್ಲರ ಜೀವನವನ್ನು ಮೊದಲಿನಂತಾಗಿಸಲಿ.
ಕನ್ನಡಿಗರೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು pic.twitter.com/n2J8uYiaRp— Kichcha Sudeepa (@KicchaSudeep) July 31, 2020
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ಧಿಕ ಶುಭಾಶಯಗಳು. ಸರ್ವರಿಗೂ ತಾಯಿಯು ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ. #Varamahalakshmi pic.twitter.com/UaDS6JYRQr
— Darshan Thoogudeepa (@dasadarshan) July 31, 2020
ಕಷ್ಟಗಳ ಕತ್ತಲು ಸರಿಯಲಿ,ಸಂತಸದ ಬೆಳಕು ಮನ ಮತ್ತು ಮನೆ ಬೆಳಗಲಿ..ಬೇಡಿದ ಇಷ್ಟಾರ್ಥಗಳು ಈಡೇರಲಿ. ಸರ್ವರಿಗೂ ಶುಭವಾಗಲಿ. ಎಲ್ಲರಿಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು💐💐💐💐 pic.twitter.com/hVFo5BD8X1
— Manvita Kamath (@manvitakamath) July 31, 2020
ಈ ವರಮಹಾಲಕ್ಷ್ಮಿ ಹಬ್ಬದಂದು ನಮ್ಮ ಮನೆ ಮನಗಳಲ್ಲಿ ನೆಮ್ಮದಿ ಹಾಗೂ ಸಮೃದ್ಧಿ ನೆಲಸಲೆಂದು ಪ್ರಾರ್ಥಿಸುತ್ತೇನೆ. ನಾಡಿನ ಸಮಸ್ತ ಜನಕ್ಕೂ ಆ ದೇವಿ ಅನುಗ್ರಹಿಸಿ, ಎಲ್ಲರ ಬಾಳು ಬಂಗಾರವಾಗಲಿ ಎಂದು ಹಾರೈಸುತ್ತೇನೆ.🙏🙏🙏 pic.twitter.com/KIYmgCSZgY
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) July 31, 2020
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. pic.twitter.com/IIdBK83oEj
— Pranitha Subhash (@pranitasubhash) July 31, 2020
ಸಮಸ್ತ ನಾಡಿನ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.🌸🙏🏻 pic.twitter.com/M5VUuMlAE4
— Rachita Ram (@RachitaRamDQ) July 31, 2020
VIDEO| ಸುಶಾಂತ್ ಆತ್ಮಹತ್ಯೆ ಪ್ರಕರಣ: ಬಿಹಾರ ಪೊಲೀಸರಿಗೆ ಸಿಕ್ಕ ವಿಡಿಯೋದಲ್ಲಿದೆ ರಿಯಾ ನಿಗೂಢ ಮಾತು!