More

    ಸೋಷಿಯಲ್​ ಮೀಡಿಯಾದಲ್ಲೇ ಕಂಬನಿ ಮಿಡಿದ ಸ್ಟಾರ್​ ನಟರು​ …

    ಬೆಂಗಳೂರು: ಕನ್ನಡ ಚಿತ್ರರಂಗ ಪ್ರತಿಭಾವಂತ ನಟ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್​ ಅವರ ಅಂತ್ಯಕ್ರಿಯೆ ಇದೀಗ ಅವರ ಹುಟ್ಟೂರಾದ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಮುಗಿದಿದೆ. ಕಡೂರು ಮತ್ತು ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಮತ್ತು ಅಭಿಮಾನಿಗಳು ಸಂಚಾರಿ ವಿಜಯ್​ಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಸಂಚಾರಿ ವಿಜಯ್ ಅಭಿನಯದ ‘ತಲೆದಂಡ’ ಚಿತ್ರದ ಟ್ರೇಲರ್​ ಬಿಡುಗಡೆ

    ಇದಕ್ಕೂ ಮುನ್ನ ಸಂಚಾರಿ ವಿಜಯ್​ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಶಿವರಾಜಕುಮಾರ್​, ಧನಂಜಯ್​, ಸತೀಶ್​ ನೀನಾಸಂ, ಪಾರುಲ್​ ಯಾದವ್​, ರಂಗಾಯಣ ರಘು, ರಾಜೇಶ್​ ನಟರಂಗ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಕೆಲವರು ಭಾಗವಹಿಸಿದ್ದು ಬಿಟ್ಟರೆ, ಮಿಕ್ಕಂತೆ ಕನ್ನಡ ಚಿತ್ರರಂಗದ ಬಹಳಷ್ಟು ಸ್ಟಾರ್​ ನಟ-ನಟಿಯರು ಕಾಣಿಸಲೇ ಇಲ್ಲ.

    ಇದನ್ನೂ ಓದಿ: ಎರಡು ವರ್ಷಗಳ ಕಾಲ ಅತ್ಯಂತ ಬ್ಯುಸಿಯಾಗಿದ್ದ ವಿಜಯ್​ …

    ಈ ಸಂದರ್ಭದಲ್ಲಿ ಸುದೀಪ್​, ದರ್ಶನ್, ಪುನೀತ್​ ರಾಜಕುಮಾರ್​, ರಕ್ಷಿತ್​ ಶೆಟ್ಟಿ, ಗಣೇಶ್​, ಧ್ರುವ ಸರ್ಜಾ ಮುಂತಾದವರು ಅಂತಿಮ ದರ್ಶನ ಪಡೆಯಬಹುದು ಎಂಬ ನಿರೀಕ್ಷಿಸಲಾಗಿತ್ತಾದರೂ, ಯಾವೊಬ್ಬ ಸ್ಟಾರ್​ ನಟ ಸಹ ಅಂತಿಮ ದರ್ಶನದಲ್ಲಿ ಕಾಣಲಿಲ್ಲ. ಬದಲಿಗೆ, ಹಲವರು ಸೋಷಿಯಲ್​ ಮೀಡಿಯಾದಲ್ಲೇ ಸಂಚಾರಿ ವಿಜಯ್​ ನಿಧನಕ್ಕೆ ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.

    ಇಬ್ಬರು ಅಂಧರಿಗೆ ಬೆಳಕು ನೀಡಿದ ವಿಜಯ್‌ ಕಣ್ಣುಗಳು: ಮಹಿಳೆಗೆ ಕಿಡ್ನಿ ಕಸಿ ಸಕ್ಸಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts