ಬೆಂಗಳೂರು: ಕನ್ನಡ ಚಿತ್ರರಂಗ ಪ್ರತಿಭಾವಂತ ನಟ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆ ಇದೀಗ ಅವರ ಹುಟ್ಟೂರಾದ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಮುಗಿದಿದೆ. ಕಡೂರು ಮತ್ತು ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಮತ್ತು ಅಭಿಮಾನಿಗಳು ಸಂಚಾರಿ ವಿಜಯ್ಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸಂಚಾರಿ ವಿಜಯ್ ಅಭಿನಯದ ‘ತಲೆದಂಡ’ ಚಿತ್ರದ ಟ್ರೇಲರ್ ಬಿಡುಗಡೆ
ಇದಕ್ಕೂ ಮುನ್ನ ಸಂಚಾರಿ ವಿಜಯ್ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಶಿವರಾಜಕುಮಾರ್, ಧನಂಜಯ್, ಸತೀಶ್ ನೀನಾಸಂ, ಪಾರುಲ್ ಯಾದವ್, ರಂಗಾಯಣ ರಘು, ರಾಜೇಶ್ ನಟರಂಗ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಕೆಲವರು ಭಾಗವಹಿಸಿದ್ದು ಬಿಟ್ಟರೆ, ಮಿಕ್ಕಂತೆ ಕನ್ನಡ ಚಿತ್ರರಂಗದ ಬಹಳಷ್ಟು ಸ್ಟಾರ್ ನಟ-ನಟಿಯರು ಕಾಣಿಸಲೇ ಇಲ್ಲ.
ಇದನ್ನೂ ಓದಿ: ಎರಡು ವರ್ಷಗಳ ಕಾಲ ಅತ್ಯಂತ ಬ್ಯುಸಿಯಾಗಿದ್ದ ವಿಜಯ್ …
ಈ ಸಂದರ್ಭದಲ್ಲಿ ಸುದೀಪ್, ದರ್ಶನ್, ಪುನೀತ್ ರಾಜಕುಮಾರ್, ರಕ್ಷಿತ್ ಶೆಟ್ಟಿ, ಗಣೇಶ್, ಧ್ರುವ ಸರ್ಜಾ ಮುಂತಾದವರು ಅಂತಿಮ ದರ್ಶನ ಪಡೆಯಬಹುದು ಎಂಬ ನಿರೀಕ್ಷಿಸಲಾಗಿತ್ತಾದರೂ, ಯಾವೊಬ್ಬ ಸ್ಟಾರ್ ನಟ ಸಹ ಅಂತಿಮ ದರ್ಶನದಲ್ಲಿ ಕಾಣಲಿಲ್ಲ. ಬದಲಿಗೆ, ಹಲವರು ಸೋಷಿಯಲ್ ಮೀಡಿಯಾದಲ್ಲೇ ಸಂಚಾರಿ ವಿಜಯ್ ನಿಧನಕ್ಕೆ ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.
ಚಿಕ್ಕ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಅದ್ಭುತ ಯುವ ಕಲಾವಿದ ಸಂಚಾರಿ ವಿಜಯ್ ಅವರು ಅಪಘಾತದಲ್ಲಿ ಅಸುನೀಗಿದ್ದಾರೆ ಎಂಬ ಸುದ್ದಿ ಆಘಾತ ಉಂಟುಮಾಡಿದೆ ಈ ನೋವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ pic.twitter.com/A4Ocz1KVJo
— Darshan Thoogudeepa (@dasadarshan) June 14, 2021
ಅದ್ಭುತ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ರವರು ಬೈಕ್ ಅಪಘಾತದಿಂದ ಅಸುನೀಗಿದ್ದಾರೆ ಎಂಬ ಆಘಾತಕಾರಿ ಸುದ್ದಿಯು ಇಡೀ ಚಿತ್ರರಂಗವನ್ನೇ ಶೋಕದಲ್ಲಿ ಮುಳುಗಿಸಿದೆ. ಅವರ ಕುಟುಂಬದವರಿಗೆ ಈ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ನೀಡಲಿ.. ಓಂ ಶಾಂತಿ 🙏💐 pic.twitter.com/otfuc9Xr15
— Upendra (@nimmaupendra) June 14, 2021
Your sudden demise has left a huge void, this is disheartening! Rest in peace Vijay. My deepest condolences to the family. pic.twitter.com/mobjpKyQ0c
— Rakshit Shetty (@rakshitshetty) June 14, 2021
ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ನಮ್ಮನ್ನು ಅಗಲಿರುವುದು ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನಷ್ಟವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.🙏🙏🙏 pic.twitter.com/PXp3B44kbj
— Dhruva Sarja (@DhruvaSarja) June 14, 2021
Sometimes life can be so unfair….
RIP pic.twitter.com/Fw80muEWJb— Ganesh (@Official_Ganesh) June 14, 2021
This is disheartening!
ಮತ್ತೆ ಹುಟ್ಟಿ ಬಾ ಗೆಳೆಯ..
ಓಂ ಶಾಂತಿ! pic.twitter.com/aMkGE4u8uL— Prem Nenapirali (@StylishstarPrem) June 14, 2021
ಇಬ್ಬರು ಅಂಧರಿಗೆ ಬೆಳಕು ನೀಡಿದ ವಿಜಯ್ ಕಣ್ಣುಗಳು: ಮಹಿಳೆಗೆ ಕಿಡ್ನಿ ಕಸಿ ಸಕ್ಸಸ್