ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ಏ. 1ರಿಂದ ಏ. 15ರ ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ.
ಎಸ್ಎಸ್ಎಲ್ಸಿ ಬೋರ್ಡ್ ಬಿಡುಗಡೆ ಮಾಡಿರುವ ಈ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದಾಗಿದ್ದು, ಅದಕ್ಕಾಗಿ ನ. 2ರವರೆಗೂ ಅವಕಾಶ ಇರಲಿದೆ.
ತಾತ್ಕಾಲಿಕ ವೇಳಾಪಟ್ಟಿ ವಿವರ ಹೀಗಿದೆ..
- ಏಪ್ರಿಲ್ 1 – ಪ್ರಥಮ ಭಾಷೆ ವಿಷಯ
- ಏಪ್ರಿಲ್ 4 – ಗಣಿತ
- ಏಪ್ರಿಲ್ 6 – ದ್ವಿತೀಯ ಭಾಷೆ ವಿಷಯ
- ಏಪ್ರಿಲ್ 10 – ವಿಜ್ಞಾನ
- ಏಪ್ರಿಲ್ 12 – ತೃತೀಯ ಭಾಷೆ ವಿಷಯ
- ಏಪ್ರಿಲ್ 15 – ಸಮಾಜ ವಿಜ್ಞಾನ
ಕೆಎಂಎಫ್ ರಾಯಭಾರಿ ಆಗಿದ್ದ ಪುನೀತ್ಗೆ ವಿಶೇಷ ಗೌರವ; ಹಾಲಿನ ಪ್ರತಿ ಪ್ಯಾಕೆಟಲ್ಲೂ ಅಪ್ಪು ನಮನ..