ಕೆಎಂಎಫ್​ ರಾಯಭಾರಿ ಆಗಿದ್ದ ಪುನೀತ್​ಗೆ ವಿಶೇಷ ಗೌರವ; ಹಾಲಿನ ಪ್ರತಿ ಪ್ಯಾಕೆಟಲ್ಲೂ ಅಪ್ಪು ನಮನ..

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರು ಎಲ್ಲರನ್ನೂ ಅಗಲಿ ಇಂದಿಗೆ ಒಂದು ವರ್ಷ. ಆದರೆ ವರ್ಷ ಕಳೆದರೂ ಬಹಳಷ್ಟು ಮಂದಿಗೆ ಅಪ್ಪು ಇಲ್ಲ ಎಂಬುದನ್ನು ಇನ್ನೂ ಅರಗಿಸಿಕೊಳ್ಳಲಿಕ್ಕೇ ಸಾಧ್ಯವಾಗಿಲ್ಲ. ಮಾತ್ರವಲ್ಲ, ಅಗಲಿಕೆ ಬಳಿಕ ಅವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದ್ದು, ಅದು ಕಿಂಚಿತ್ತೂ ತಗ್ಗದಿರುವುದು ಎಲ್ಲೆಡೆ ಗೋಚರಿಸುತ್ತಿದೆ. ಪುನೀತ್ ಅಗಲಿದ ದಿನದಿಂದಲೂ ರಾಜ್ಯದ ಹಲವೆಡೆ ಪುನೀತ್ ಭಾವಚಿತ್ರಗಳು ಕಣ್ಣಿಗೆ ಕಾಣಿಸುತ್ತಿದ್ದು, ಅವರ ಹೆಸರಲ್ಲಿ, ಅವರ ನೆನಪಲ್ಲಿ ಹಲವೆಡೆ ಒಂದಲ್ಲ ಒಂದು ಕೆಲಸ ನಡೆಯುತ್ತಲೇ ಇದೆ. ಆ ಮೂಲಕ … Continue reading ಕೆಎಂಎಫ್​ ರಾಯಭಾರಿ ಆಗಿದ್ದ ಪುನೀತ್​ಗೆ ವಿಶೇಷ ಗೌರವ; ಹಾಲಿನ ಪ್ರತಿ ಪ್ಯಾಕೆಟಲ್ಲೂ ಅಪ್ಪು ನಮನ..