ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಸಮೀಪ ಬುಧವಾರ ತಡರಾತ್ರಿ ಯಾವುದೋ ರೈಲಿನಡಿಗೆ ಸಿಲುಕಿ ಸುಮಾರು ೧೦ರಷ್ಟು ಎಮ್ಮೆಗಳು ದಾರುಣವಾಗಿ ಮೃತಪಟ್ಟಿವೆ.
ಬೈಕಂಪಾಡಿ ಬಳಿಯ ಬಗ್ಗುಂಡಿ ಕೆರೆ ಆಸುಪಾಸಿನಲ್ಲಿ ಓಡಾಡಿಕೊಂಡಿದ್ದ ಈ ಬೀಡಾಡಿ ಎಮ್ಮೆ, ಕೋಣಗಳ ಹಿಂಡು ಹಸಿರು ಮೇವು ಅರಸಿಕೊಂಡು ಕುಳಾಯಿ ಹೊಸಬೆಟ್ಟು ರೈಲ್ವೆ ಹಳಿಯತ್ತ ಹೋಗಿದ್ದವು. ಗುರುವಾರ ರಾತ್ರಿ ತೋಕೂರು ಕೋಡಿಕೆರೆ ಬಳಿ ಸಂಚರಿಸುವ ರೈಲಿನಡಿಗೆ ಸಿಲುಕಿರುವ ಸಾಧ್ಯತೆ ಇದೆ. ಗುರುವಾರ ಬೆಳಗ್ಗೆ ಈ ವಿಚಾರ ಗೊತ್ತಾಗಿದ್ದು ಸ್ಥಳೀಯ ವಿಶ್ವ ಹಿಂದು ಪರಿಷತ್ ನಾಯಕರು, ಕಾರ್ಪೊರೇಟರ್ ವರುಣ್ ಚೌಟ ಸ್ಥಳಕ್ಕೆ ತೆರಳಿದ್ದಾರೆ.
ಆ ವೇಳೆಗಾಗಲೇ ಸುಮಾರು ೧೦ರಷ್ಟು ಎಮ್ಮೆಗಳು ತೀವ್ರ ಗಾಯದಿಂದ ಮೃತಪಟ್ಟಿದ್ದವು. ಇನ್ನೂ ಮೂರು ತೀವ್ರ ಗಾಯಗೊಂಡಿದ್ದು ಬದುಕುಳಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.