ಮುಂಬೈ: ಬಾಲಿವುಡ್ನಲ್ಲಿ ಹಲವು ವರ್ಷ ತಾರಾ ನಟಿಯಾಗಿ ಮಿಂಚಿ, ಕ್ಯಾನ್ಸರ್ಗೆ ತುತ್ತಾದರೂ ಅದನ್ನು ಗೆದ್ದ ಸೊನಾಲಿ ಬೇಂದ್ರೆ ಕೋವಿಡ್ 19 ಲಾಕ್ಡೌನ್ ವೇಳೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಕ್ಯಾನ್ಸರ್ ಗೆಲ್ಲುವ ಜತೆಗೆ ಮೊದಲಿನಿಂದಲೂ ತಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸ್ಮೂದಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಅದರ ರೆಸಿಪಿಯನ್ನೂ ಕೊಟ್ಟಿದ್ದಾರೆ. ಏನದು ಸ್ಮೂದಿ? ಏನದು ರೆಸಿಪಿ?
ಸ್ಮೂದಿ ಎಂದರೆ ಮಂದವಾದ ಜ್ಯೂಸ್ ಎಂದು ಅರ್ಥ. ಮನೆಯಲ್ಲೇ ತಯಾರಿಸಬಹುದಾದ, ಹಣ್ಣು, ಅರಿಷಿನ ಕೊಂಬು, ಶುಂಠಿ ಮತ್ತಿತರ ವಸ್ತುಗಳನ್ನು ಹಾಕಿದ ಸ್ಮೂದಿ ಇದಾಗಿದೆ.
ಇದನ್ನು ತಯಾರಿಸಲು ಒಂದು ಸೇಬು, ಒಂದು ಕ್ಯಾರಟ್, ಒಂದು ಬೆಟ್ಟದ ನೆಲ್ಲಿಕಾಯಿ, 2 ಇಂಚು ಹಸಿ ಅರಿಷಿನ ಕೊಂಬು, 2 ಇಂಚು ಹಸಿ ಶುಂಠಿ, 2 ಏಪ್ರಿಕಾಟ್, ಒಂದಷ್ಟು ಬಲ್ಯೂಬೆರಿ ಮತ್ತು ಕ್ರಾನ್ ಬೆರಿ, 7 ಬಾದಾಮಿ, ಒಂದಷ್ಟು ದಾಲ್ಚಿನ್ನಿ ಪುಡಿ, 2ರಿಂದ 4 ವಾಲ್ನಟ್, 2 ಬೀಜ ತೆಗೆದ ಖರ್ಜೂರ ಮತ್ತು ಒಂದು ಮುಷ್ಟಿಯಷ್ಟು ಪಾಲಕ್ ಸೊಪ್ಪು ಬೇಕಾಗುತ್ತದೆ.
ಇವೆಲ್ಲವನ್ನೂ ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಂಡಾಗ ಸ್ಮೂದಿ ಸಿದ್ಧವಾಗುತ್ತದೆ. ಒಂದು ಗ್ಲಾಸ್ನಷ್ಟು ಸ್ಮೂದಿಯನ್ನು ಕುಡಿದರೆ ರೋಗನಿರೋಧ ಶಕ್ತಿ ಹೆಚ್ಚಾಗುತ್ತದೆ ಅಂತೆ.
ನಾನು ಮೊದಲಿನಿಂದಲೂ ಈ ಸ್ಮೂದಿಯನ್ನು ಕುಡಿಯುತ್ತಿದ್ದೆ. ನಾನು ಕ್ಯಾನ್ಸರ್ಗೆ ತುತ್ತಾಗಿ, ಕೀಮೋಥೆರಪಿ ಮಾಡಿಸಿಕೊಳ್ಳುವಾಗ ಈ ಸ್ಮೂದಿಯ ಸೇವನೆಯಿಂದ ತುಂಬಾ ಅನುಕೂಲವಾಯಿತು ಎಂದು ಸೊನಾಲಿ ಬೇಂದ್ರೆ ಹೇಳಿಕೊಂಡಿದ್ದಾರೆ.
ಕನ್ನಡ ಕುವರ ಅನಿಲ್ ಕುಂಬ್ಳೆ ಸಹಾಯ ಸ್ಮರಿಸಿದ ಪಾಕ್ನ ಮಾಜಿ ಸ್ಪಿನ್ನರ್ ಸಕ್ಲೇನ್ ಮುಸ್ತಾಕ್, ಕುಂಬ್ಳೆ ಮಾಡಿದ ಸಹಾಯವಾದರೂ ಏನು?