ಭೋಪಾಲ್: ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಂಡಿದೆ. 114 ಇದ್ದ ಶಾಸಕರ ಸಂಖ್ಯಾಬಲ 92ಕ್ಕೆ ಕುಸಿದು ಆಗಲೋ, ಈಗಲೋ ಪತನವಾಗುವಂತಿದೆ. ಉಳಿದ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿದೆ.
ಹೀಗಿರುವಾಗ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರ ಪುತ್ರ ನಮ್ಮ ಸರ್ಕಾರ ಉಳಿಯುತ್ತದೆ. ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ರೆಬಲ್ ಆಗಿ ಕರ್ನಾಟಕ ಸೇರಿಕೊಂಡಿರುವ ಶಾಸಕರೆಲ್ಲರೂ ಖಂಡಿತ ವಾಪಸ್ ಬರುತ್ತಾರೆ. 22 ಶಾಸಕರೂ ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಾರೆ ಎಂದು ಸಂಸದ ನಕುಲ್ ನಾಥ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಕಮಲನಾಥ್ ನೇತೃತ್ವದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಖಂಡಿತ ಅಧಿಕಾರದಲ್ಲಿ ಮುಂದುವರಿಯುತ್ತದೆ ಎಂಬ ಭರವಸೆ ನನಗೆ ಇದೆ ಎಂದಿದ್ದಾರೆ.
ಯಾವ ಶಾಸಕರೂ ಖುದ್ದಾಗಿ ಬಂದು ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಿಲ್ಲ. ಹಾಗಾಗಿ ಯಾವುದೂ ಇನ್ನೂ ಅಂಗೀಕಾರ ಆಗಿಲ್ಲ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕರೋರ್ವರು ಮಾತನಾಡಿ, ನಾವು ಉಳಿದ 92 ಶಾಸಕರನ್ನು ಹಾಗೂ ಮಧ್ಯಪ್ರದೇಶ ಸರ್ಕಾರ ಉಳಿಯಲು ಬೆಂಬಲ ನೀಡುವವರನ್ನು ರಾಜಸ್ಥಾನದ ಹೋಟೆಲ್ಗಳಿಗೆ ಸ್ಥಳಾಂತರಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿಗೆ 107 ಶಾಸಕರ ಸಂಖ್ಯಾಬಲ ಇದೆ.(ಏಜೆನ್ಸೀಸ್)
ಟ್ರಾಫಿಕ್ ಪೋಲಿಸರು ಊದಪ್ಪ ಅಂತಾರೆ, ಚಾಲಕರು ಊದಲ್ಲ ಅಂತಿದ್ದಾರೆ- ಡ್ರಿಂಕ್ ಆ್ಯಂಡ್ ಡ್ರೈವ್ ಫಜೀತಿ
ಸಿಂಧಿಯಾ ರಾಜೀನಾಮೆ, ಮಧ್ಯಪ್ರದೇಶ ಸರ್ಕಾರದ ಅಸ್ಥಿರತೆ ಬಗ್ಗೆ ಮೌನ ಮುರಿದ ರಾಹುಲ್ ಗಾಂಧಿಯವರದ್ದು ಅದೇ ‘ರಾಗಾ’