ತಿರುಪತಿ: ಆಂಧ್ರ ಪ್ರದೇಶದ ಚಿತ್ತೂರು(ತಿರುಪತಿ) ಶಾಸಕ ಬಿ. ಕರುಣಾಕರ ರೆಡ್ಡಿ ಪುತ್ರ ಅಭಿನಯ್ ರೆಡ್ಡಿ ತಿರುಪತಿ ವಿಮಾನ ನಿಲ್ದಾಣದ ನೀರು ಪೂರೈಕೆ ವ್ಯವಸ್ಥೆಗೆ ತಡೆಯೊಡ್ಡಿ ವಿಲಕ್ಷಣ ರೀತಿಯಲ್ಲಿ ದೇಶದ ಗಮನಸೆಳೆದಿದ್ದಾರೆ.
ಅಭಿನಯ್ ರೆಡ್ಡಿ ತಿರುಪತಿಯ ಡೆಪ್ಯುಟಿ ಮೇಯರ್. ರೇಣಿಗುಂಟ ಏರ್ಪೋರ್ಟ್ ಮ್ಯಾನೇಜರ್ ಸುನಿಲ್ ಮತ್ತು ಅಭಿನಯ್ ರೆಡ್ಡಿ ನಡುವಿನ ಸಂಘರ್ಷದ ಪರಿಣಾಮ ಇದು. ಈ ವಾರ ಆರಂಭದಲ್ಲಿ ರಾಷ್ಟ್ರೀಯ ಕಬಡ್ಡಿ ಸ್ಪರ್ಧೆಯ ಸಮಾರೋಪದಲ್ಲಿ ಭಾಗಿಯಾಗಲು ಬಂದ ಆಂಧ್ರ ಸಚಿವ ಬೋತ್ಸಾ ಸತ್ಯನಾರಾಯಣ ಮತ್ತು ಟಿಟಿಡಿ ಚೇರ್ವುನ್ ವೈ.ವಿ ಸುಬ್ಬಾ ರೆಡ್ಡಿ ಅವರನ್ನು ಬರಮಾಡಿಕೊಳ್ಳಲು ಅಭಿನಯ್ ರೆಡ್ಡಿ ಏರ್ಪೋರ್ಟ್ಗೆ ಹೋಗಿದ್ದರು.
ಆದರೆ, ಏರ್ಪೋರ್ಟ್ ಮ್ಯಾನೇಜರ್ ಸುನಿಲ್ ಅವರು ಅಭಿನಯ್ ರೆಡ್ಡಿ ಮತ್ತು ಅವರ ಸಹಾಯರಿಗೆ ವಿಮಾನ ನಿಲ್ದಾಣ ಪ್ರವೇಶಿಸಲು ಅನುಮತಿ ನಿರಾಕರಿಸಿದರು. ಪರಿಣಾಮ ತೀವ್ರ ವಾಗ್ವಾದ ನಡೆಯಿತು. ಇದರ ಬೆನ್ನಿಗೆ, ಪ್ರತೀಕಾರ ಕ್ರಮವೆಂಬಂತೆ ಏರ್ಪೋರ್ಟ್ ಮತ್ತು ಅಲ್ಲಿನ ವಸತಿ ಸಂಕೀರ್ಣಕ್ಕೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದರು.