More

    ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…

    ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಹಾವು ಕಾಣಿಸಿಕೊಂಡಿದ್ದು, ಚಾಲಕರು ಡಿಪೋದಿಂದ ಬಸ್​ ತೆಗೆಯಲು ಭಯ ಪಡುವಂತಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ದಿನಗಟ್ಟಲೆ ಡಿಪೋಗಳಲ್ಲೇ ನಿಲ್ಲಿಸಿರುವ ಬಸ್​ಗಳಲ್ಲಿ ಹಾವು, ಹುಳ, ಹೆಗ್ಗಣಗಳು ಸೇರಿಕೊಂಡಿದ್ದು, ತುಂಬಾ ದಿನಗಳ ಮೇಲೆ ಮೊದಲ ಸಲ ಬಸ್​ ತೆಗೆಯಲು ಮುಂದಾಗುವ ಚಾಲಕರು ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.

    ಕರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್​ ವಿಧಿಸಿದ್ದರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಸ್​ ಸಂಚಾರವೂ ಸ್ಥಗಿತೊಂಡಿತ್ತು. ಹೀಗಾಗಿ ಕೆಎಸ್​ಆರ್​ಟಿಸಿ ಬಸ್​ಗಳನ್ನು ಹೆಚ್ಚೂಕಡಿಮೆ ಎರಡು ತಿಂಗಳಿನಿಂದ ಡಿಪೋಗಳಲ್ಲಿ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಹಾವು-ಹೆಗ್ಗಣಗಳು ಬಸ್​ನೊಳಗೆ ಆಶ್ರಯ ಪಡೆದ ಪ್ರಕರಣಗಳು ಬೆಳಕಿಗೆ ಬಂದಿವೆ.

    ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    ಇಂದು ತುಮಕೂರು ಡಿಪೋದಲ್ಲಿ ಚಾಲಕರೊಬ್ಬರು ಬಸ್​ ತೆಗೆಯಲು ಮುಂದಾದಾಗ ಹಾವೊಂದು ಚಾಲಕರ ಆಸನದ ಬಳಿಯೇ ಇರುವುದು ಕಂಡುಬಂದಿದೆ. ಕೂಡಲೇ ಪರಿಣತರೊಬ್ಬರನ್ನು ಕರೆಸಿ ಆ ಹಾವನ್ನು ಹಿಡಿದು, ಅಲ್ಲಿಂದ ತೆರವುಗೊಳಿಸಲಾಗಿದೆ.

    ಭಾರತದಲ್ಲಿ ಇಂದು ಒಂದು ಸೆಕೆಂಡ್​ನಲ್ಲಿ ಹಾಕಿಸಿದ ಲಸಿಕೆ ಎಷ್ಟು ಗೊತ್ತೇ!?

    ಸಗಣಿಯನ್ನೂ ಬಿಡದ ಕಳ್ಳರು; 800 ಕೆ.ಜಿ. ಗೋಮಯ ಕಳವು, ಪೊಲೀಸರಿಗೆ ದೂರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts