ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕ ನಡುವಿನ ಕ್ರಿಕೆಟ್ ಪಂದ್ಯವನ್ನು ಹಾವೊಂದು ಕೆಲವು ನಿಮಿಷಗಳ ನಿಲ್ಲಿಸಿದ ವಿದ್ಯಮಾನವೊಂದು ನಡೆದಿದೆ. ಭಾರತ, ದಕ್ಷಿಣ ಆಫ್ರಿಕ ನಡುವಿನ ಎರಡನೇ ಟಿ20 ಇನ್ನಿಂಗ್ಸ್ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಗುವಾಹಟಿಯಲ್ಲಿನ ಬರ್ಸಪರ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಇಂದು ಪಂದ್ಯ ನಡೆಯುತ್ತಿರುವಾಗ ಕೆಲವರು ಮಳೆ ಬರಬಹುದು ಎಂಬ ಯೋಚನೆಯಲ್ಲಿದ್ದರು. ಆದರೆ ಆ ಸಂದರ್ಭದಲ್ಲಿ ಹಾವು ಕ್ರೀಡಾಂಗಣಕ್ಕೇ ಬಂದುಬಿಟ್ಟಿತ್ತು.
ಭಾರತ ತಂಡ ಆಡುತ್ತಿದ್ದಾಗ ಹಾವನ್ನು ಗಮನಿಸಿದ ದಕ್ಷಿಣ ಆಫ್ರಿಕದ ಕೆಲವು ಆಟಗಾರರು ಕೂಡಲೇ ಕೆ.ಎಲ್.ರಾಹುಲ್ ಮತ್ತು ಫೀಲ್ಡ್ನಲ್ಲಿದ್ದ ಅಂಪೈರ್ ಗಮನಕ್ಕೆ ತಂದರು. ತಕ್ಷಣ ಅಗತ್ಯ ಉಪಕರಣಗಳನ್ನು ಹಿಡಿದು ಬಂದ ಪರಿಣತರು ಅದನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಆಟಗಾರರು ಪಾನೀಯ ವಿರಾಮ ಪಡೆದರು.
‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್ನೋಟ್ನಲ್ಲಿತ್ತು ಈ ಕೊನೇ ಆಸೆ
ರಾಮಜನ್ಮಭೂಮಿಯಲ್ಲಿ ಸಿದ್ಧಗೊಂಡಿದೆ ಮತ್ತೊಂದು ಮಾಸ್ಟರ್ ಪ್ಲ್ಯಾನ್; ಉಳಿದ ಜಾಗದಲ್ಲಿ ಆಗಲಿರುವುದೇನು?