More

    ಓವರ್​ಹೆಡ್ ಟ್ಯಾಂಕ್​ನಲ್ಲಿ ಹಾವು!

    ಕುಂದಗೋಳ: ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿನ ಓವರ್​ಹೆಡ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಅದರಲ್ಲಿ ಹಾವೊಂದು ಪ್ರತ್ಯಕ್ಷವಾಗಿದೆ. ಅದನ್ನು ಕಂಡ ಗ್ರಾಪಂನ ಸ್ವಚ್ಛತೆ ಸಿಬ್ಬಂದಿ ಭಯಭೀತರಾದ ಘಟನೆ ಬುಧವಾರ ಸಂಜೆ ನಡೆದಿದೆ.

    ಕಳೆದ ಮೂರು ವರ್ಷಗಳ ಹಿಂದೆ ನಿರ್ವಿುಸಲಾಗಿದ್ದ ಓವರ್​ಹೆಡ್ ಟ್ಯಾಂಕ್ ಸ್ವಚ್ಛಗೊಳಿಸದೆ ಬಹಳ ದಿನಗಳಾಗಿದ್ದವು. ಬೇಸಿಗೆ ಹೆಚ್ಚಾಗಿದ್ದರಿಂದ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ರಡ್ಡೇರ ಹಾಗೂ ಚಿದಾನಂದ ಪೂಜಾರ ಅವರು ಗ್ರಾಪಂ ಸಿಬ್ಬಂದಿಯೊಂದಿಗೆ ಸೇರಿ ಟ್ಯಾಂಕ್​ಗೆ ಮೋಟರ್ ಅಳವಡಿಸಿ ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದರು. ಆಗ ಟ್ಯಾಂಕ್​ನಲ್ಲಿ ಇಳಿದ ಸ್ವಚ್ಛತಾ ಸಿಬ್ಬಂದಿ ಒಳಗೆ ಹಾವನ್ನು ಕಂಡು ಭಯಭೀತರಾಗಿ ಎದ್ನೋ ಬಿದ್ನೋ ಎಂದು ಲಘುಬಗೆಯಿಂದ ಮೇಲೇರಿ ಬಂದಿದ್ದಾರೆ. ಆಗ ಅಲ್ಲಿದ್ದವರ ಮೂಲಕ ಹುಬ್ಬಳ್ಳಿಯ ಹಾವು ಹಿಡಿಯುವ ವಸಂತ ಎಂಬುವರಿಗೆ ಫೋನಾಯಿಸಿ ಕರೆಯಿಸಿದ್ದಾರೆ. ಆಗ ಅವರು ೕವರ್ ಹೆಡ್ ಟ್ಯಾಂಕ್​ನಲ್ಲಿದ್ದ ಹಾವನ್ನು ಹಿಡಿದು ಸುರಕ್ಷತವಾಗಿ ಬೇರೆಡೆ ಸ್ಥಳಾಂತರಿಸಿದ್ದಾರೆ. ಬಳಿಕ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ ಇಡೀ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಯಿತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts