More

    ಸಿಸಿ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರ ಆಗ್ರಹ

    ಸಿರಿಗೇರಿ: ಸಿ.ಸಿ ರಸ್ತೆ ಹಾಗೂ ಕುಡಿಯುವ ನೀರು ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಗ್ರಾಮದ 1ನೇ ವಾರ್ಡ್‌ನ ಬಸವನಪೇಟೆಯ ಜನ ಗುರುವಾರ ಗ್ರಾಪಂ ಸದಸ್ಯರನ್ನು ತರಾಟೆಗೆ ತಗೆದುಕೊಂಡರು.

    ವಾರ್ಡ್‌ನಲ್ಲಿ 300 ರಿಂದ 400 ಜನರು ವಾಸಿಸುತ್ತಿದ್ದಾರೆ. ವಾರ್ಡ್‌ನಿಂದ ಆಯ್ಕೆಯಾದ ಸುಜಾತಾ ಕುಮಾರ್‌ಗೌಡ ಅವರು ನೆಪ ಮಾತ್ರಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಮಮ್ಮ ಮಾತನಾಡಿ, ವಾರ್ಡ್‌ನಲ್ಲಿ ಸಮರ್ಪಕವಾದ ರಸ್ತೆಗಳಿಲ್ಲ. ಇದರಿಂದ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ಸ್ಥಿತಿ ಪಕ್ಕದ ವಾರ್ಡ್‌ನಲ್ಲಿ ಇಲ್ಲ ಎಂದು ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು.

    ವಾರ್ಡ್‌ನಲ್ಲಿ ಗ್ರಾಪಂ ಸದಸ್ಯರು ಇದ್ದರೂ ಇಲ್ಲದಂತಿದ್ದಾರೆ. ಹಲವು ಬಾರಿ ಸಮಸ್ಯೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಸಮಸ್ಯೆ ಪರಿಹರಿಸದಿದ್ದರೇ ಮುಂದಿನ ಚುನಾವಣೆ ವೇಳೆ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದರು.

    ಗ್ರಾಪಂ ಸದಸ್ಯೆ ಸುಜಾತಾ ಅವರ ಪತಿ ಕುಮಾರ್‌ಗೌಡ ಮಾತನಾಡಿದರು. ಪ್ರಮುಖರಾದ ವಡ್ಡರ್ ನಾಗರಾಜ್, ವಿ.ಪಾರ್ವತಮ್ಮ, ವಿ.ಹುಲಿಗೆಮ್ಮ, ಕೆ.ಯಶೋಧಮ್ಮ, ಕೆ.ಮಾರೆಮ್ಮ, ಗುಂಡಮ್ಮ, ವಿ.ಮಾರೆಪ್ಪ, ಕೆ.ನಾಗರಾಜ್, ಕೆ.ಮಹಾಂತೇಶ್, ಕೆ.ಅಮರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts