ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮೈಸೂರಿನಲ್ಲಿ ನಡೆದಿದ್ದ ಅತ್ಯಾಚಾರಕ್ಕೆ ಕುರಿತಂತೆ ಸದನದಲ್ಲಿ ಮಾತನಾಡುತ್ತಿದ್ದಾಗಲೇ ಅವರ ಪಂಚೆ ಜಾರಿದ ಪ್ರಸಂಗವೊಂದು ಜರುಗಿದೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರ ಹತ್ತಿರ ಬಂದು, ‘ಪಂಚೆ ಕಳಚಿದೆ’ ಎಂದು ಪಿಸುಗಟ್ಟಿದ ಬಳಿಕವಷ್ಟೇ ಸಿದ್ದರಾಮಯ್ಯ ಅವರಿಗೆ ಪಂಚೆ ಜಾರಿರುವುದು ಗೊತ್ತಾಗಿದ್ದು.
ಡಿಕೆಶಿ ಹೇಳಿದ ತಕ್ಷಣವೇ ಸಿದ್ದರಾಮಯ್ಯ ತಮ್ಮ ಪಂಚೆಯನ್ನು ಸರಿಪಡಿಸಿಕೊಂಡರು. ‘ನಮ್ಮ ಅಧ್ಯಕ್ಷರು ನಮ್ಮ ನಾಯಕರ ಮಾನ ಕಳೆಯುವ ಕೆಲಸ ಮಾಡಲಿಲ್ಲ, ಗುಟ್ಟಾಗಿ ಹೇಳಿದ್ರು. ಅದೇ ಈಶ್ವರಪ್ಪ ಆಗಿದ್ದರೆ ಬಹಿರಂಗವಾಗಿ ಹೇಳಿರುತ್ತಿದ್ದರು’ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ನಗೆಯುಕ್ಕಿಸಿದರು.
ನಾನಿನ್ನು ಪಂಚೆ ಬಿಡಲ್ಲ ಎಂದು ಗಾಂಧಿ ಹೇಳಿದ್ದ ದಿನವೇ ಹೀಗಾಯ್ತು..
‘ಇನ್ನುಮುಂದೆ ನಾನು ಪಂಚೆಯನ್ನು ಮಾತ್ರ ತೊಡುತ್ತೇನೆ’ ಎಂಬುದಾಗಿ ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧಿಯವರು ತಮಿಳುನಾಡಿನ ಮಧುರೈನಲ್ಲಿ ಮಾತು ನೀಡಿದ್ದರು. ಅದರಂತೆಯೇ ನಡೆದುಕೊಂಡಿದ್ದರು. ಗಾಂಧಿಯವರು ಹಾಗಂದಿದ್ದ ನೂರು ವರ್ಷಗಳ ಬಳಿಕ ಅದೇ ದಿನ ಕಾಕತಾಳೀಯ ಎಂಬಂತೆ ಸಿದ್ದರಾಮಯ್ಯ ಅವರ ಪಂಚೆ ಜಾರಿದ ಪ್ರಸಂಗವೂ ಜರುಗಿದೆ.
ಇದನ್ನೂ ಓದಿ: ಈತ ಆಟೋದಲ್ಲಿ ಬರ್ತಾನೆ, ಸೈಕಲ್ನಲ್ಲಿ ಹೋಗ್ತಾನೆ!; ಇವನೊಬ್ಬ ದುಬಾರಿ ‘ಬೈಸಿಕಳ್ಳ’
ನಾನು ಕರೋನ ಬಂದ ಬಳಿಕ ವೇಟ್ ಲಾಸ್ ಆಗಿದ್ದೇನೆ. ಜಿಂದಾಲ್ಗೆ ಹೋಗಿ ಚಿಕಿತ್ಸೆ ಪಡೆದು ಬಂದ ಬಳಿಕ ದೇಹತೂಕ ಕಡಿಮೆ ಆಗಿದೆ. ಹೀಗಾಗಿ ಇತ್ತೀಚೆಗೆ ಪಂಚೆ ಜಾರುತ್ತಿದೆ ಎಂದು ಸಿದ್ದರಾಮಯ್ಯ ತಮಗುಂಟಾದ ಮುಜುಗರದ ಸನ್ನಿವೇಶದ ಕುರಿತು ಸಮಜಾಯಿಷಿ ನೀಡಿದರು.
ಜೀವಂತ ಸುಟ್ಟುಹೋದಾಕೆಯ ಸಾವಿನ ಹಿಂದಿನ ಅಸಲಿ ಕಾರಣವೇ ಇದು!; ಅಪಾರ್ಟ್ಮೆಂಟ್ ಅಗ್ನಿ ಆಕಸ್ಮಿಕದ ಹಿಂದಿನ ದುರಂತ
ಕರೊನಾಗೆ ವ್ಯಕ್ತಿ ಬಲಿ: ನೊಂದ ಹೆಂಡತಿ-ಮಕ್ಕಳಿಂದ ಆತ್ಮಹತ್ಯೆ ಯತ್ನ; ಮಗಳ ಸಾವು, ಅಮ್ಮನ ಸ್ಥಿತಿ ಚಿಂತಾಜನಕ..