ಬೆಂಗಳೂರು: ಬಿಗ್ಬಾಸ್ ಸೀಸನ್ 8 ರೋಚಕವಾಗಿ ಸಾಗುತ್ತಿದೆ. ಹಾಸ್ಯ ಕಲಾವಿದ ಮಂಜು ಪಾವಗಡ ಮನೆಯನ್ನು ಸದಾ ನಗಿಸುವಂತೆ ಮಾಡುತ್ತಿದ್ದರೆ, ನಟಿ ಶುಭ ಪೂಂಜಾ ಮನೆಯ ಜನರು ಮತ್ತು ವೀಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಭಾನುವಾರದಂದು ಗೀತಾ ಭಟ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅದಕ್ಕೂ ಮೊದಲು ಮನೆ ಮಂದಿಯೊಂದಿಗೆ ಮಾತನಾಡಿದ ಕಿಚ್ಚ ಸುದೀಪ್, ಶುಭ ಪೂಂಜಾ ತಲೆಗೆ ಹುಳ ಬಿಟ್ಟಿದ್ದಾರೆ. ಶುಭ ಮತ್ತು ಅವರ ಭಾವಿ ಪತಿ ಬಗ್ಗೆ ಮಾತನಾಡಿದ ಸುದೀಪ್, ಶುಭ ಅವರೇ ಒಂದು ವೇಳೆ ನೀವು 100 ದಿನ ಇದೇ ಮನೆಯಲ್ಲಿ ಇದ್ದರೆ ನಿಮ್ಮ ಬಾವಿ ಪತಿಯನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೀರಿ ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಶುಭ, ನನಗೇನು ತೊಂದರೆಯಾಗುವುದಿಲ್ಲ ಆದರೆ ಅವರು ನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸುವ ಸುದೀಪ್ “ಓ ಭ್ರಮೆ” ಎಂದು ನಗೆ ಚಟಾಕಿ ಹಾರಿಸುತ್ತಾರೆ.
ಶುಭ ಅವರೇ, ನಿಮ್ಮನ್ನು ಅವರು ಮಿಸ್ ಮಾಡಿಕೊಳ್ಳುತ್ತಾರೆ ಎಂದು ನೀವೆಂದುಕೊಂಡಿದ್ದೀರಿ. ಆದರೆ ನೀವು ಇಲ್ಲಿರುವಾಗ ಆ ನೋವನ್ನು ಮರೆಸಲು ಅವರಿಗೆ ಬೇರಾದರೂ ಬೇಕಲ್ಲವೇ ಎಂದು ಪ್ರಶ್ನಿಸುತ್ತಾರೆ. ಇಷ್ಟಕ್ಕೆ ತಲೆ ಹುಳ ಬಿಟ್ಟುಕೊಳ್ಳುವ ಶುಭ, ನೀವೇನಾದರೂ ಅವನನ್ನು ಬೇರೊಬ್ಬ ಹುಡುಗಿ ಜತೆ ನೋಡಿದಿರಾ ಎಂದು ಕೇಳುತ್ತಾರೆ. ಈ ರೀತಿ ಒಂದಿಷ್ಟು ಸಮಯ ಶುಭರ ಕಾಲೆಳೆದ ಸುದೀಪ್ ನಂತರ ನಿಜ ವಿಚಾರಕ್ಕೆ ಬರುತ್ತಾರೆ. ನನಗೆ ನಿಮ್ಮ ಭಾವಿ ಪತಿಯ ಮುಖವೇ ನೆನಪಿಲ್ಲ, ಇನ್ನು ಏನು ಮಾಡುತ್ತಿದ್ದಾರೆ ಎಂದು ನನಗೆಲ್ಲಿ ಗೊತ್ತಿರುತ್ತದೆ ಎಂದು ಗೊಂದಲಕ್ಕೆ ತೆರೆ ಎಳೆಯುತ್ತಾರೆ. (ಏಜೆನ್ಸೀಸ್)
VIDEO| ಅಬ್ಬಬ್ಬಾ! ಜ್ವಾಲಾಮುಖಿಯ ರುದ್ರತಾಂಡವ ಹೇಗಿದೆ ನೋಡಿ! ಎದೆ ಝಲ್ ಎನಿಸುವ ವಿಡಿಯೋ ಇದು…
‘ಲಕ್ಷಾಂತರ ಆಮೆಗಳು ಒಂದೇ ದಿನ ಒಂದೇ ಸ್ಥಳದಲ್ಲಿ ಮೊಟ್ಟೆ ಇಡುತ್ತವೆ’ ಇದು ಹೇಗೆ ಸಾಧ್ಯ?