ಭದ್ರಾವತಿ: ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವದ ಕಾರ್ಯಕ್ರಮ ಸೋಮವಾರ ಸಂಜೆ ಅಂಕುರಾರ್ಪಣ, ಕಂಕಣ ಧಾರಣೆ ಮೂಲಕ ಆರಂಭವಾಯಿತು. ಎರಡನೇ ದಿನವಾದ ಮಂಗಳವಾರ ಯಾಗ ಶಾಲಾ ಪ್ರವೇಶ ಮತ್ತು ದೇವಾಲಯದ ಮುಂದಿರುವ ಗರುಡಗಂಬದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಉತ್ಸವಾದಿಗಳಿಗೆ ಚಾಲನೆ ನೀಡಲಾಯಿತು. ಗುರುವಾರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಪ್ರಯುಕ್ತ ದೇವಾಲಯದ ಪ್ರಧಾನ ಅರ್ಚಕ ರಂಗನಾಥಶರ್ಮ ದೇವಾಲಯದ ಮುಂದಿರುವ ಗರುಡಗಂಬಕ್ಕೆ ಗರುಡ ಪಟದ ಧ್ವಜಾರೋಹಣ ನಡೆಸಿ ಪೂಜೆ ಸಲ್ಲಿಸಿದರು.