ಕೋಲಾರ: ರಾತ್ರಿ ಬೆಳಗಾಗುವುದರೊಳಗೆ ಪೆಟ್ಟಿಗೆ ಅಂಗಡಿಯೊಂದು ಕಣ್ಮರೆಯಾಗಿದ್ದು, ಇದಕ್ಕೆ ಜಮೀನು ವಿವಾದ ಕಾರಣವೇ ಎಂಬ ಶಂಕೆ ಮೂಡಿದೆ. ಕೋಲಾರ ಜಿಲ್ಲೆಯಲ್ಲಿ ಮಾಲೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಮಾಲೂರು ತಾಲೂಕಿನ ಎಡಕೋಡಿ ಗ್ರಾಮದಲ್ಲಿ ಶಂಕರಪ್ಪ ಎಂಬವರಿಗೆ ಸೇರಿರುವ ಪೆಟ್ಟಿಗೆ ಅಂಗಡಿ ಕಾಣೆಯಾಗಿದೆ. ಅಂಗವಿಕಲ ಕುಟುಂಬದ ಜೀವನೋಪಾಯಕ್ಕಾಗಿ ಈ ಅಂಗಡಿಯನ್ನು ಹಾಕಿಕೊಳ್ಳಲಾಗಿತ್ತು.
ಆದರೆ ಇಂದು ಬೆಳಗ್ಗೆ ಈ ಪೆಟ್ಟಿಗೆ ಅಂಗಡಿಯೇ ನಾಪತ್ತೆಯಾಗಿದೆ. ಜಮೀನು ವಿವಾದದ ಹಿನ್ನಲೆಯಲ್ಲಿ ಪಕ್ಕದ ಜಮೀನಿನವರು ಹೊತ್ತೊಯ್ದಿರಬಹುದು ಎಂಬ ಶಂಕೆ ಮೂಡಿದೆ. ಅಂಗಡಿಯಲ್ಲಿದ್ದ ಸಾಮಗ್ರಿಗಳ ಜತೆಗೆ ಅಂಗಡಿಯನ್ನೂ ತೆಗೆಯಲಾಗಿದ್ದು, ಮಾಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕೆಜಿಎಫ್-2 ಚಿತ್ರದ ಪ್ರೇರಣೆ; 72 ಗಂಟೆಗಳಲ್ಲಿ 3 ಸೆಕ್ಯುರಿಟಿ ಗಾರ್ಡ್ಗಳ ಕೊಲೆ: ನಿದ್ರೆಗೆಟ್ಟ ಕೈದಿಗಳು..
ತ್ರಿವೇಣಿ ಸಂಗಮದಲ್ಲಿನ ಮಹಾ ಕುಂಭಮೇಳಕ್ಕೆ ಬರಲಿದ್ದಾರೆ ಯುಪಿ ಸಿಎಂ ಯೋಗಿ ಆದಿತ್ಯನಾಥ
ಗಟ್ಟಿಗಿತ್ತಿ ಅಜ್ಜಿ ಕೈಗೆ ಸಿಕ್ಕಿಬಿದ್ದ ಸರಗಳ್ಳಿ; ರಾಜಮ್ಮನ ಎದೆಗಾರಿಕೆ-ಸಮಯಪ್ರಜ್ಞೆಗೆ ಪೊಲೀಸರ ಸೆಲ್ಯೂಟ್